Advertisement

ಪ್ರಧಾನಿ ಮೋದಿಯನ್ನು ಅವಮಾನಿಸುವುದು ಪ್ರಜಾಪ್ರಭುತ್ವವನ್ನು ಅವಮಾನಿಸಿದಂತೆ: ಸಿ.ಟಿ.ರವಿ

04:15 PM Nov 22, 2021 | Team Udayavani |

ಶಿವಮೊಗ್ಗ: ನರೇಂದ್ರ ಮೋದಿಯವರು ಎಂದೂ ಜಾತಿ, ಹಣದ ರಾಜಕಾರಣ ಮಾಡಲಿಲ್ಲ. ಬದಲಿಗೆ ಜನಾದೇಶದ ಮೂಲಕವೇ ಪ್ರಧಾನಿಯಾಗಿದ್ದಾರೆ. ಇಂಥವರನ್ನು ಅಪಮಾನಿಸುವುದು ಪ್ರಜಾಪ್ರಭುತ್ವವನ್ನು ಅವಮಾನಿಸಿದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇದನ್ನು ತಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ಮುತ್ಸದಿತನ ಕಾಣುತ್ತಿಲ್ಲ‌ ಎಂದರು.

ಜನಸ್ವರಾಜ್ ಯಾತ್ರೆಯನ್ನು ಜನಬರ್ಬಾದ್ ಯಾತ್ರೆ ಎನ್ನುತ್ತಿದ್ದಾರೆ. ಕೇವಲ ಅಸಂಬಂಧ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನ ಮಂತ್ರಿಯನ್ನು ಹೆಬ್ಬೆಟ್ಟು ಪ್ರಧಾನಿ ಎಂದರು ಈ ಮೂಲಕ ಪ್ರಜಾಪ್ರಭುತ್ವಕ್ಕೆ ಅಗೌರವ ಮಾಡುತ್ತಿದ್ದಾರೆ‌. ಸಿದ್ದರಾಮಯ್ಯ ಅವರ ಹತಾಶೆಯನ್ನು ಅವರ ಹೇಳಿಕೆಗಳು ತೋರಿಸುತ್ತಿವೆ. ಸಿದ್ದರಾಮಯ್ಯ ಅವರು ಆರೋಪ ಮಾಡುತ್ತಾರೆ. ಬಳಿಕ ನಿರ್ದೋಷಿ ಎಂದು ಸಾಬೀತುಪಡಿಸಿ ಎನ್ನುತ್ತಾರೆ. ಇದು ಯಾವ ನ್ಯಾಯ ಎಂದು ಸಿ.ಟಿ.ರವಿ ಹೇಳಿದರು.

ಇದನ್ನೂ ಓದಿ:ಕಾರು ಅಪಘಾತ, ಮಾನವಿಯತೆ ಮೆರೆದ ಸಂಸದ ಪ್ರತಾಪ್ ಸಿಂಹ

ಬಿಟ್ ಕಾಯಿನ್ ಬಗ್ಗೆ ಸಾಕ್ಷಗಳಿದ್ದರೆ ತನಿಖಾ ಸಂಸ್ಥೆಗಳಿಗೆ ನೀಡಿ‌. ಅದನ್ನು ಬಿಟ್ಟು ಕೇವಲ ಆರೋಪ ಮಾಡುತ್ತಿದ್ದರೆ ಅದು ಪ್ರಚಾರಕ್ಕೆ ಮಾಡುತ್ತಿರುವುದು ಎಂಬ ಅಭಿಪ್ರಾಯ ಬರುತ್ತದೆ ಎಂದು ಅವರು ಹೇಳಿದರು.

Advertisement

ಕೃಷಿ ಮಸೂದೆಗಳಲ್ಲಿ ಯಾವ ರೈತ ವಿರೋಧಿ ನೀತಿ ಇತ್ತು ಎಂದು ಅದನ್ನು ವಿರೋಧಿಸಿದವರು ಸ್ಪಷ್ಟಪಡಿಸಲಿ. ಕೆಲವು ರಾಜ್ಯಗಳಲ್ಲಿ ಮನವರಿಕೆ ಮಾಡಲು ಆಗಲಿಲ್ಲ ಹಾಗಾಗಿ ಕೃಷಿ ಮಸೂದೆ ಹಿಂಪಡೆಯಲಾಗಿದೆ. ಮಸೂದೆ ಹಿಂಪಡೆದರೂ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳುತ್ತಿರುವ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಗೆ ಜನಬೆಂಬಲವೇ ಇಲ್ಲ. ವೇದಿಕೆ ಮೇಲೆ ಕುರ್ಚಿಗಾಗಿಯೇ ಜಗಳವಾಡುತ್ತಾರೆ. ಹೀಗಾಗಿಯೇ ಯಾರೂ ವೇದಿಕೆ ಮೇಲೆ ಕೂರಬಾರದು ಎಂಬ ನಿಯಮವನ್ನು ಕಾಂಗ್ರೆಸ್ ನವರು ತಂದುಕೊಂಡಿದ್ದಾರೆ. ಇದರ ಹಿಂದೆ ಇನ್ನೊಂದು ಕಾರಣವೂ ಇದೆ. ಕೆಲವೊಮ್ಮೆ ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆ ಮೇಲೆಯೇ ಹೆಚ್ಚುಜನ ಇರುತ್ತಾರೆ. ವೇದಿಕೆ ಕೆಳಗೆ ಜನರೇ ಇರುವುದಿಲ್ಲ. ಹೀಗಾಗಿ ಕಾಂಗ್ರೆಸ್ ಈ ನಿಯಮ ಜಾರಿಗೆ ತಂದುಕೊಂಡಿರಬಹುದು ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು

Advertisement

Udayavani is now on Telegram. Click here to join our channel and stay updated with the latest news.

Next