Advertisement

ದೇಯಿ ಬೈದ್ಯೆತಿಗೆ ಅವಮಾನ: ಸೆರೆ

08:25 AM Sep 11, 2017 | Harsha Rao |

ಪುತ್ತೂರು: ಪಡುಮಲೆಯ ಮುಡಿಪಿನಡ್ಕದಲ್ಲಿರುವ ಕರಾವಳಿಯ ಶಕ್ತಿ ದೇವತೆ ದೇಯಿ ಬೈದ್ಯೆತಿ ಮೂರ್ತಿಯ ಜತೆ ಅಶ್ಲೀಲವಾಗಿ ಫೂಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಈಶ್ವರಮಂಗಲ ನಿವಾಸಿ ಸ್ಥಳೀಯ ರಿಕ್ಷಾ ಚಾಲಕ ಹನೀಫ್‌ ಬಂಧಿತ ಆರೋಪಿ. ಕೋಟಿ-ಚೆನ್ನಯರ ಹುಟ್ಟೂರು ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಗು ತ್ತಿದ್ದಂತೆ, ಅರಣ್ಯ ಇಲಾಖೆಯೂ ಯೋಜನೆಯೊಂದನ್ನು ರೂಪಿಸಿತು. ರಮಾನಾಥ ರೈ ಮುತುವರ್ಜಿಯಲ್ಲಿ ಇಲಾಖೆಯ ಜಾಗದಲ್ಲೇ ಔಷಧವನವೊಂದನ್ನು ನಿರ್ಮಿಸಿ, ಅದಕ್ಕೆ ನಾಟಿ ವೈದ್ಯೆ, ಕೋಟಿ-ಚೆನ್ನಯರ ತಾಯಿ ದೇಯಿ ಬೈದ್ಯೆತಿಯ ಹೆಸರಿಡಲಾಯಿತು. ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ನಿರ್ಮಿಸಿದ ಕಲಾಕೃತಿಗಳು ಇದೀಗ ದುರ್ಬಳಕೆಯಾಗುತ್ತಿದ್ದು, ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ.

ಹನೀಫ್ನ ಕೃತ್ಯದ ಬಗ್ಗೆ  ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಸಂಘದ ಕೋಶಾಧಿಕಾರಿ ನಾಗೇಶ್‌ ಬಲಾ°ಡ್‌, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಕಾರ್ಯ ನಿರ್ವಹಣಾ ಅ ಧಿಕಾರಿ ಆರ್‌.ಸಿ. ನಾರಾಯಣ್‌ ರೆಂಜ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಶಶಿಧರ ಕಿನ್ನಿಮಜಲು, ಯುವವಾಹಿನಿ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು ಮೊದಲಾದವರ ನಿಯೋಗ ಗ್ರಾಮಾಂತರ ಠಾಣಾಧಿಕಾರಿಯನ್ನು ಭೇಟಿಯಾಗಿ, ಆರೋಪಿಯ ಬಂಧಿಸಿ ಕಠಿನ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದ್ದರು. 

ಗ್ರಾಮಾಂತರ ಪೊಲೀಸರು, ಆರೋಪಿಯನ್ನು ರವಿವಾರವೇ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ 295 (ಎ) ಕಲಂ ಮತ್ತು ಐಟಿ ಕಾಯಿದೆ- 2000 ಇದರ 67 ಐಟಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಔಷಧ ವನ
6 ಎಕರೆ ಜಾಗದಲ್ಲಿ ದೇಯಿ ಬೈದ್ಯೆತಿ ಔಷಧವನವನ್ನು ಮುಡಿಪಿನಡ್ಕದಲ್ಲಿ ನಿರ್ಮಿಸಿ ಕಳೆದ ವರ್ಷ ಇದು ಉದ್ಘಾಟಿಸಲಾಗಿತ್ತು. ಇದರ ನಡುವೆ ಪ್ರಾಚೀನ ತುಳುನಾಡಿನ ಶೈಲಿಯನ್ನು ಹೋಲುವ ಪುಟ್ಟ ಕುಟೀರವನ್ನು ನಿರ್ಮಿಸಲಾಗಿದೆ. ಕುಟೀರದ ಮುಂಭಾಗ ದೇಯಿ ಬೈದ್ಯೆತಿ ಔಷಧ ಅರೆಯುವ ರೀತಿಯ ಮೂರ್ತಿಯನ್ನು ನಿರ್ಮಿಸಲಾಗಿದೆ. ಬದಿಯಲ್ಲಿ ಕೋಟಿ- ಚೆನ್ನಯರ ಮೂರ್ತಿಯೂ ಇದೆ. ಕುಟೀರದ ಆವರಣಕ್ಕೆ ಬರಲು ಸಾರ್ವ ಜನಿಕರಿಗೆ ಅವಕಾಶ ಕಲ್ಪಿಸ ಲಾಗಿದ್ದು,  ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಮೂರ್ತಿಯ ಸುರಕ್ಷತೆ ದೃಷ್ಟಿಯಿಂದ ಆವರಣದ ಒಳಗಡೆ ಪ್ರವೇಶವನ್ನು ನಿರ್ಬಂಧಿಸಬೇಕು. ಮಾತ್ರವಲ್ಲ ಸಿಬಂದಿ ನೇಮಿಸಿ, ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್‌, ಉಪಾಧ್ಯಕ್ಷ ಪ್ರವೀಣ್‌ ಕುಮಾರ್‌ ಕೆಡೆಂಜಿಗುತ್ತು, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯ ನಿರ್ವಹಣಾಧಿಕಾರಿ ಆರ್‌.ಸಿ. ನಾರಾಯಣ್‌ ಆಗ್ರಹಿಸಿದ್ದಾರೆ.

Advertisement

ಸಾರ್ವತ್ರಿಕ ಖಂಡನೆ
ದೇಯಿ ಬೈದ್ಯೆàತಿ ಮೂರ್ತಿಯ ಪಕ್ಕದಲ್ಲಿ  ಹನೀಫ್‌ ಅಶ್ಲೀಲ ಭಂಗಿಯಲ್ಲಿ ಕುಳಿತುಕೊಂಡು ಫೂಟೋ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಶನಿವಾರ ರಾತ್ರಿ ವೇಳೆ ಫೇಸ್‌ಬುಕ್‌ ಹಾಗೂ ವಾಟ್ಸ್‌ ಆ್ಯಪ್‌ನಲ್ಲಿ ಈ ಫೂಟೋ ಕಾಣಿಸಿಕೊಂಡಿದೆ. ಸಾಮಾಜಿಕ ಅಶಾಂತಿಗೆ ಕಾರಣ ವಾಗ  ಬಹುದಾದ ಈ ಕೃತ್ಯದ ಬಗ್ಗೆ ಸಮಾಜದ ಎಲ್ಲ ವರ್ಗದವರಿಂದ ಸಾರ್ವತ್ರಿಕ ವಾಗಿ ಖಂಡನೆ ವ್ಯಕ್ತವಾಗಿತ್ತು. ಆರೋಪಿ ಬಂಧನಕ್ಕೆ ಆಗ್ರಹಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next