Advertisement

ಗುತ್ತಿಗೆದಾರರ ಹಣದಿಂದಲೇ ಹೊಸ ಟೈಲ್ಸ್‌ ಅಳವಡಿಕೆ

01:24 PM Aug 14, 2021 | Team Udayavani |

ಬೆಂಗಳೂರು: ಕಮರ್ಷಿಯಲ್‌ ಸ್ಟ್ರೀಟ್‌ ರಸ್ತೆಗೆ ಅಳವಡಿಸಿರುವ ಟೈಲ್ಸ್‌ಗಳ ಬಣ್ಣ ಹಾಳಾಗಿದ್ದು, ಕೂಡಲೆ ಅದನ್ನು ತೆರವುಗೊಳಿಸಿ ಗುತ್ತಿಗೆದಾರರ
ಹಣದಿಂದಲೇ ಸೆಪ್ಟೆಂಬರ್‌ ವೇಳೆಗೆ ಹೊಸ ಟೈಲ್ಸ್‌ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

Advertisement

ಸ್ಮಾರ್ಟ್‌ಸಿಟಿ ವತಿಯಿಂದ ಅಭಿವೃದ್ಧಿಪಡಿಸುತ್ತಿರುವ ಕಮರ್ಷಿಯಲ್‌ ಸ್ಟ್ರೀಟ್‌ ರಸ್ತೆ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

ಕಮರ್ಷಿಯಲ್‌ ಸ್ಟ್ರೀಟ್‌ ರಸ್ತೆಯು450 ಮೀಟರ್‌ ಉದ್ದವಿದ್ದು, ಸ್ಮಾರ್ಟ್‌ ಸಿಟಿ ವತಿಯಿಂದ 5.5 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಯನ್ನು ಕೈಗತ್ತಿಕೊಳ್ಳಲಾಗಿದೆ.

ಇದನ್ನೂ ಓದಿ:ಶಿಕಾರಿಪುರ:ಸಂಗೊಳ್ಳಿ ರಾಯಣ್ಣ ಪುತ್ಥಳಿ ರಾತ್ರೋರಾತ್ರಿ ತೆರವು

ರಸ್ತೆಗೆ ಅಳವಡಿಸಿರುವ ಟೈಲ್ಸ್‌ಗಳ ಬಣ್ಣ ಹಾಳಾಗಿದ್ದು, ಅವುಗಳನ್ನು ಪೂರ್ತಿಯಾಗಿ ತೆಗೆದು ಗುಣಮಟ್ಟವಿರುವ ಟೈಲ್ಸ್‌ಗಳನ್ನು ಅಳವಡಿಸಿ,
ಮಾದರಿ ರಸ್ತೆಯನ್ನಾಗಿ ಮಾಡಲು ತಿಳಿಸಲಾಗಿದೆ. ಅಲ್ಲದೆ, ಕಮರ್ಷಿಯಲ್‌ ಸ್ಟ್ರೀಟ್‌ಗೆ ಹೊಂದಿಕೆಯಾಗುವ ಕ್ರಾಸ್‌ ರಸ್ತೆಗಳನ್ನು ಸಹಹೊಸದಾಗಿ ಸೇರ್ಪಡೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

Advertisement

ಹೆಚ್ಚುವರಿ ಹಣ ವ್ಯಯಿಸುವುದಿಲ್ಲ:ಕಮರ್ಷಿಯಲ್‌ ಸ್ಟ್ರೀಟ್‌ ರಸ್ತೆ ಕಾಮಗಾರಿಗೆ ಹೆಚ್ಚುವರಿ ಹಣ ವ್ಯಯಿಸುವುದಿಲ್ಲ. ಯಾವುದೇ ಕಳಪೆ ಟೈಲ್ಸ್‌
ಅಳವಡಿಸಿರುವುದಿರಿಂದ ಗುತ್ತಿಗೆದಾರರೇ ಸದ್ಯ ಅಳವಡಿಸಿರುವ ಟೈಲ್ಸ್‌ ತೆರವುಗೊಳಿಸಿ ಗುಣಮಟ್ಟದ ಟೈಲ್ಸ್‌ ಅಳವಡಿಸಲಿದ್ದು, ರಸ್ತೆಯನ್ನು ಮೂರು ವರ್ಷಗಳ ಕಾಲ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗಗಳಲ್ಲಿ ಯುಟಿಲಿಟಿ,  ಡಕ್ಟ್ ಗಳನ್ನು ಅಳವಡಿಸಲಾಗಿದೆ. ಅಲ್ಲ ಅಂಗಡಿಗಳಿಗೆ ಮಳೆ ನೀರು ನುಗ್ಗದ ಹಾಗೆ ಕಾಲುವೆಗೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಲಾಗಿದೆ. ಇರುವ ರಸ್ತೆಯನ್ನು ತ್ವರಿತಗತಿಯಲ್ಲಿ ದುರಸ್ತಿಗೊಳಿಸಲು ತಾಕೀತು ಮಾಡಲಾಗಿದೆ ಎಂದರು.

ರಾಜಕಾಲುವೆ ಪರಿಶೀಲನೆ:ಇದೇ ವೇಳೆ ಹಲಸೂರು ಕೆರೆ ಬಳಿಯ ಗುರುದ್ವಾರ ಜಂಕ್ಷನ್‌ ಮುಂಭಾಗದ ರಾಜಕಾಲುವೆಯನ್ನು ಪರಿಶೀಲನೆ ಮಾಡಿದರು. ಮಳೆಗಾಲದ ವೇಳೆ ನೀರು ಸರಾಗವಾಗಿ ಹರಿದು ಹೋಗಬೇಕು.ಈಭಾಗದಲ್ಲಿ ಯಾವುದೇ ಸಮಸ್ಯೆ ಆಗಬಾರದು. ಕಾಲ ಕಾಲಕ್ಕೆ ಕಾಲುವೆಯಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸುತ್ತಿರಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ‌ ಶಾಸಕ ರಿಜ್ವಾನ ಹರ್ಷದ್‌, ಪಾಲಿಕೆ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯ ಆಯುಕ್ತ ಗೌರವ್‌ ಗುಪ್ತ, ಪೂರ್ವವಲಯ ಆಯುಕ್ತ ಮನೋಜ್‌ ಜೈನ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ, ವಲಯ ಮುಖ್ಯ ಇಂಜಿನಿಯರ್‌ ಪ್ರಭಾಕರ್‌, ಸ್ಮಾರ್ಟ್‌ ಸಿಟಿ ಮುಖ್ಯ ಇಂಜಿನಿಯರ್‌ ಪ್ರಹ್ಲಾದ್‌ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next