Advertisement

ಇನ್‌ಸ್ಟಾಗ್ರಾಮ್‌ ಪರಿಚಯ: ಚೆನೈನಿಂದ ಸುರತ್ಕಲ್‌ಗೆ ಓಡಿ ಬಂದ ಎಂಬಿಬಿಎಸ್‌ ವಿದ್ಯಾರ್ಥಿನಿ!

10:47 PM Oct 20, 2022 | Team Udayavani |

ಸುರತ್ಕಲ್‌: ಇನ್‌ಸ್ಟಾಗ್ರಾಮ್‌ನಿಂದ ಪರಿಚಯವಾದ ಎಂಜಿನಿಯರ್‌ ವಿದ್ಯಾರ್ಥಿಯ ಸಖ್ಯ ಬೆಳೆಸಲು ರಾಜಸ್ಥಾನ ಮೂಲದ ಪ್ರಸ್ತುತ ಚೆನ್ನೈನಲ್ಲಿ ಎಂಬಿಬಿಎಸ್‌ ದ್ವಿತೀಯ ವರ್ಷ ಓದುತ್ತಿರುವ ವಿದ್ಯಾರ್ಥಿನಿಯೋರ್ವಳು ಓಡಿ ಬಂದ ಘಟನೆ ಬುಧವಾರ ನಡೆದಿದೆ.

Advertisement

ರೇಶು ಎಂಬಾಕೆ ಚೆನ್ನೈನಲ್ಲಿ ಎಂಬಿಬಿಎಸ್‌ ಓದುತ್ತಿದ್ದು ಯಾವುದೋ ಕಾರಣಕ್ಕೆ ಸುರತ್ಕಲ್‌ಗೆ ಬಂದಿದ್ದಳು. ಬರುವ ಸಂದರ್ಭ ಬ್ಯಾಗ್‌, ಮೊಬೈಲ್‌ ಕಳವಾಗಿ ಏನೂ ತೋಚದ ಸ್ಥಿತಿಯಲ್ಲಿ ,ಸುರತ್ಕಲ್‌ನ ಕಾಂತೇರಿ ದೈವಸ್ಥಾನದ ಬಳಿ ಕೈಯ್ಯಲ್ಲಿ ದುಡ್ಡಿಲ್ಲದೆ ಚಿನ್ನ ಮಾರಲು ಅಂಗಡಿ ಕೇಳಿದ ಯುವತಿಯ ಬಗ್ಗೆ ಸಂಶಯ ಮೂಡಿದಾಗ ಸ್ಥಳೀಯ ಆಪದ್ಭಾಂಧವ ಸಮಾಜ ಸೇವಾ ಸಂಸ್ಥೆಯ ಉಮೇಶ್‌ ದೇವಾಡಿಗ ಇಡ್ಯಾ ಹಾಗೂ ಸ್ಥಳೀಯರಾದ ಕೃಷ್ಣಪ್ಪ,ಕೇಶವ ,ನಾಗೇಶ್‌ ಕಾನಾ ಅವರು ವಿಚಾರಿಸಿದಾಗ ದಾರಿ ತಪ್ಪಿ ಬಂದಿರುವ ಶಂಕೆ ವ್ಯಕ್ತವಾಗಿ ಸುರತ್ಕಲ್‌ ಪೊಲೀಸ್‌ ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲು ನೆರವಾದರು.

ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಸ್ಥಳೀಯ ಸಂಸ್ಥೆಯ ಎಂಜಿನಿಯರ್‌ ವಿದ್ಯಾರ್ಥಿಗೆ ಪರಿಚಯವಿಲ್ಲ ಎಂಬುದು ತಿಳಿದು ಬಂತು.ಈ ಹಿಂದೆಯೂ ಇದೇ ರೀತಿ ಮನೆ ಬಿಟ್ಟು ಹೋದ ಬಗ್ಗೆ ಮಾಹಿತಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next