Advertisement

Inspector: ರೌಡಿಶೀಟರ್‌ನಿಂದ ಲಂಚ ಪಡೆದ ಇನ್ಸ್‌ಪೆಕ್ಟರ್‌ ಸಸ್ಪೆಂಡ್‌

10:32 AM Apr 21, 2024 | Team Udayavani |

ಬೆಂಗಳೂರು: ರೌಡಿಶೀಟರ್‌ನಿಂದ ಲಂಚ ಪಡೆದಿದ್ದ ಆರೋಪದಡಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ರೌಡಿ ನಿಗ್ರಹ ಪಡೆಯ ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಅಮಾನತುಗೊಳಿಸಿ ನಗರದ ಪೊಲೀಸ್‌ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿ ದ್ದಾರೆ.

Advertisement

ಮಾರತ್ತಹಳ್ಳಿ ಠಾಣೆಯ ರೌಡಿ ಶೀಟರ್‌ ರೋಹಿತ್‌ನಿಂದ  ಜ್ಯೋತಿ ರ್ಲಿಂಗ ಹಣ ಪಡೆದಿದ್ದರು. ಈ ಬಗ್ಗೆ ಸಾರ್ವಜನಿಕರೊಬ್ಬರು ಮೇಲ ಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಎಸಿಪಿ ದರ್ಜೆ ಅಧಿಕಾರಿ ಜ್ಯೋತಿರ್ಲಿಂಗ ವಿರುದ್ಧ ಇಲಾಖಾ ತನಿಖೆ ನಡೆಸಿ ಆಯುಕ್ತರಿಗೆ ವರದಿ ನೀಡಿದ್ದರು.

ಚುನಾವಣೆ ಹಿನ್ನೆಲೆಯಲ್ಲಿ ಸಿಸಿಬಿಯ ರೌಡಿ ನಿಗ್ರಹದಳದ ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗಗೂ ರೌಡಿಗಳ ಮೇಲೆ ನಿಗಾ ವಹಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು. ತಪಾಸಣೆ ನೆಪದಲ್ಲಿ ರೌಡಿಶೀಟರ್‌ ರೋಹಿತ್‌ನನ್ನು ವಿಚಾರಣೆ ನಡೆಸಿದ್ದ ಜ್ಯೋತಿರ್ಲಿಂಗ, ಯುಪಿಐ ಮೂಲಕ ಹಣ ಪಡೆದುಕೊಂಡಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next