Advertisement
ಕಬೀರ್ ಖಾನ್ ನಿರ್ದೇಶನದ ಮಾಡಿದ್ದ ʼಭಜರಂಗಿ ಭಾಯಿಜಾನ್ʼ ಭಾವನಾತ್ಮಕವಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ಸಲ್ಮಾನ್ ಖಾನ್ ಅವರ ಅಭಿನಯ ʼಭಜರಂಗಿ ಭಾಯಿಜಾನ್ʼ ಸಿನಿರಸಿಕರ ಕಣ್ಣಂಚಿನಲ್ಲಿ ನೀರು ತರಿಸಿತ್ತು.
Related Articles
Advertisement
“ವಿಜಯೇಂದ್ರ ಪ್ರಸಾದ್ ನನಗಾಗಿ ಎರಡು ಕಥೆಗಳನ್ನು ಬರೆದಿದ್ದಾರೆ. ಒಂದು ‘ವಿಕ್ರಮಾರ್ಕುಡು 2’, ಹಿಂದಿಯಲ್ಲಿ (ರೌಡಿ ರಾಥೋರ್ 2) ಇದರ ಸಬ್ಜೆಕ್ಟ್ ಸಿದ್ಧವಾಗಿದೆ. ಉತ್ತಮ ಕಲಾವಿದರನ್ನು ಹುಡುಕುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಭಜರಂಗಿ ಭಾಯಿಜಾನ್ 2 ಗಾಗಿ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಶೀಘ್ರದಲ್ಲೇ ಅವರು ಅದನ್ನು ಸಲ್ಮಾನ್ ಭಾಯಿಗೆ ವಿವರಿಸುತ್ತಾರೆ ಮತ್ತು ಮುಂದೆ ಏನಾಗುತ್ತದೆ ಎಂಬುದನ್ನು ನೋಡಬೇಕಿದೆ” ಎಂದು ಹೇಳಿದ್ದಾರೆ.
2021 ರಲ್ಲಿ ʼಆರ್ ಆರ್ ಆರ್ʼ ಸಿನಿಮಾದ ಪ್ರಚಾರದ ವೇಳೆ ಸಲ್ಮಾನ್ ಖಾನ್ ಅವರು ʼಭಜರಂಗಿ ಭಾಯಿಜಾನ್ʼ ಸೀಕ್ವೆಲ್ ಬಗ್ಗೆ ಮಾತನಾಡಿದ್ದರು.
ಪೂಜಾ ಹೆಗ್ಡೆ ಸೀಕ್ವೆಲ್ನಲ್ಲಿ ನಟಿಸಲಿದ್ದು, ʼಪವನ್ ಪುತ್ರ ಭಾಯಿಜಾನ್ʼ ಎನ್ನುವ ಟೈಟಲ್ ಇರಲಿದೆ ಎನ್ನಲಾಗಿದೆ.
ʼರೌಡಿ ರಾಥೋರ್ 2ʼ ನಲ್ಲಿ ಅಕ್ಷಯ್ ಕುಮಾರ್ ಬದಲು ಸಿದ್ಧಾರ್ಥ್ ಮಲ್ಹೋತ್ರಾ ಇರಲಿದ್ದಾರೆ ಎನ್ನಲಾಗಿದೆ. ಆದರೆ ಅದು ಅಧಿಕೃತವಾಗಿಲ್ಲ.