Advertisement

ಸಿಎಂ ಯೋಗಿ ಭೇಟಿಯಾದ ಮೃತ ಇನ್ಸ್‌ಪೆಕ್ಟರ್‌ ಕುಟುಂಬ: ನ್ಯಾಯ ಭರವಸೆ

10:51 AM Dec 06, 2018 | Team Udayavani |

ಲಕ್ನೋ : ಕಳೆದ ಸೋಮವಾರ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಗೋಹತ್ಯೆ ವಿಷಯದಲ್ಲಿ ಭುಗಿಲೆದ್ದಿದ್ದ ಹಿಂಸೆಗೆ ಬಲಿಯಾಗಿದ್ದ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಅವರ ದುಃಖತಪ್ತ ಕುಟುಂಬ ಸದಸ್ಯರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಇಂದು ಗುರುವಾರ ಭೇಟಿಯಾಗಿ ಸಾಂತ್ವನ ಹೇಳಿದರು. 

Advertisement

ಸುಬೋಧ್‌ ಕುಮಾರ್‌ ಅವರ ಪುತ್ರ ಶ್ರೇಯ ಪ್ರತಾಪ್‌ ಸಹಿತ ಕುಟುಂಬದ ಇತರ ಸದಸ್ಯರು ಸಿಎಂ ಆದಿತ್ಯನಾಥ್‌ ಅವರನ್ನು ಇಲ್ಲಿನ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ “ನಾವಿಂದು ಸಿಎಂ ಅವರನ್ನು ಭೇಟಿಯಾದೆವು; ಅವರು ನಮಗೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ’ ಎಂದು ಹೇಳಿದರು. 

ಮೃತ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಅವರನ್ನು ರಾಜ್ಯ ಸರಕಾರ ಹುತಾತ್ಮನೆಂದು ಘೋಷಿಸಬೇಕು; ಅವರ ಹೆಸರಲ್ಲಿ ಸ್ಮಾರಕವೊಂದನ್ನು ನಿರ್ಮಿಸಬೇಕು ಎಂದು ಅವರ ಕುಟುಂಬ ಸದಸ್ಯರು ಸರಕಾರವನ್ನು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next