Advertisement

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ತಪಾಸಣೆ

08:41 AM May 25, 2020 | Team Udayavani |

ಕುಂದಗೋಳ: ತಾಲೂಕಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 24 ಮಕ್ಕಳಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿಡಿಪಿಒ ಅನ್ನಪೂರ್ಣಾ ಸಂಗಳದ ಅವರು ಈ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಿದರು.

Advertisement

ನಂತರ ಮಾತನಾಡಿ, ಅಂಗನವಾಡಿ ಕೇಂದ್ರದ ಮೂಲಕ ಎಲ್ಲ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಮನೆಗೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. 24 ಮಕ್ಕಳು ಬೆಳವಣಿಗೆಗೆ ತಕ್ಕಂತೆ ತೂಕದ ಕೊರತೆಯಿಂದಾಗಿ ಬಳಲುತ್ತಿರುವುದು ಕಂಡು ಬಂದಿರುವುದರಿಂದ 4 ಜನರ ಸಮಿತಿ ರಚಿಸಿ ಆ ಮಕ್ಕಳ ಮನೆಗೆ ತೆರಳಿ ಬೆಳ್ಳಿಗ್ಗೆ ಮೊಟ್ಟೆ, ಹಾಲು, ಮಧ್ಯಾಹ್ನ ಅಕ್ಕಿ ಹಾಗೂ ಹೆಸರು ಬೇಳೆಯಿಂದ ಸಿದ್ಧಪಡಿಸಿದ ಕಿಚಡಿ, 3 ಗಂಟೆಗೆ ರಾಗಿ ರೊಟ್ಟಿ ಹಾಗೂ ಸೊಪ್ಪಿನ ಪಲ್ಲೆ ಮತ್ತು ರಾಗಿ ಮಾಲ್ಟ್, ಸಂಜೆ 6ಕ್ಕೆ ಹಾಲು, ಹಣ್ಣು ಹಾಗೂ ಮೊಳಕೆ ಒಡೆದ ಕಾಳುಗಳನ್ನು ಖುದ್ದಾಗಿ ಸಮಿತಿಯವರು ಮಕ್ಕಳಿಗೆ ಉಣ್ಣಬಡಿಸುತ್ತಿದ್ದಾರೆ.

ಈ ಸಮಿತಿಯಲ್ಲಿ ಬಾಲ ವಿಕಾಸ ಸಮಿತಿ, ಕಿಶೋರಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮಗುವಿನ ತಾಯಿ ಸೇರಿ 4 ಜನ ಇರುತ್ತಾರೆ. 24 ಮಕ್ಕಳಲ್ಲಿ 13 ಹೆಣ್ಣು ಮಕ್ಕಳು, 11 ಗಂಡು ಮಕ್ಕಳು ಇವೆ ಎಂದು ಹೇಳಿದರು. ಶಿಲ್ಪಾ ಪಟೇಲ್‌, ಎಂಟು ಜನ ಮೇಲ್ವಿಚಾರಕಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next