Advertisement

ಸಬ್ಸಿಡಿ ಪಡೆದು ಕಟ್ಟಿದ ಪಾಲಿಹೌಸ್‌ ಪತ್ತೆಗೆ ಒತ್ತಾಯ

04:06 PM Oct 21, 2020 | Suhan S |

ಬಂಗಾರಪೇಟೆ: ಬಿತ್ತನೆ ಆಲೂಗಡ್ಡೆ ನಿಗದಿ ಮಾಡುವ ಜೊತೆಗೆ ಸರ್ಕಾರದಿಂದ ಲಕ್ಷ ಲಕ್ಷ ಸಬ್ಸಿಡಿ ಹಣಪಡೆದು ನಿರ್ಮಾಣಮಾಡಿರುವ ಪಾಲಿಹೌಸ್‌ ಗಳನ್ನು ಹುಡುಕಿಕೊಟ್ಟು ಹನಿ ನೀರಾವರಿ ಪದ್ಧತಿ ಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತೋಟ ಗಾರಿಕೆ ಇಲಾಖೆ ಅಧಿಕಾರಿಗಳ ಕೆಲಸ ಖಾಸಗಿ ಆಲೂಗಡ್ಡೆ ಮಾಲೀಕರು, ಹನಿ ನೀರಾವರಿ ಪದ್ಧತಿ ಏಜೆಂಟರುಪರಕೆಲಸಮಾಡುವಇಲಾಖೆಯಾಗಿದೆ ಎಂದು ಆರೋಪಿಸಿದರು.

ಕೋಲಾರಜಿಲ್ಲೆಯಲ್ಲಿತಿನ್ನುವಆಲೂಗಡ್ಡೆಯನ್ನೇ  ಪ್ರತಿ ಮೂಟೆಗೆ 5 ಸಾವಿರದಿಂದ 6 ಸಾವಿರ ವರೆಗೆಯಾವುದೇ ಬಿಲ್‌ ನೀಡದೆ ವ್ಯಾಪಾರ ಮಾಡುತ್ತಿ ದ್ದರೂ ಖಾಸಗಿ ವ್ಯಾಪಾರಸ್ಥರು ಸಂಬಳ ನೀಡುವ ಅಧಿಕಾರಿಗಳಂತೆ ಕ್ರಮ ಕೈಗೊಳ್ಳಲು ಎಂದು  ಆರೋಪಿಸಿದರು.

ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌ ಮಾತನಾಡಿ, ಹನಿ ನೀರಾವರಿ ಹಾಗೂ ಪಾಲಿಹೌಸ್‌,ನೆಟ್‌ಹೌಸ್‌ ಮತ್ತಿತರರ ಇಲಾಖೆಯಲ್ಲಿನ ಅನುದಾನಗಳನ್ನು ನಕಲಿ ಬಿಲ್‌ಗ‌ಳನ್ನು ತಯಾರಿಸಿ ಲೂಟಿ ಮಾಡುತ್ತಿದ್ದಾರೆ. ಅಧಿಕಾರಿಗಳು ಹನಿನೀರಾವರಿ ಏಜೆಂಟರು ಬಂದರೆ ತುರ್ತಾಗಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ನಿರ್ದೇಶಕ ಶಿವಾರೆಡ್ಡಿ, ಈ ಬಗ್ಗೆ ಹಿರಿಯ ಅಧಿಕಾರಿ ಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು. ರೈತ ಸಂಘದ ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಸ್ವಸ್ತಿಕ್‌ ಶಿವು, ಮಂಜುನಾಥ್‌, ಐತಾಂಡಹಳ್ಳಿ ಮುನ್ನಾ, ಜಾನ್‌ ಪಾಷ ಉಪಸ್ಥಿತರಿದ್ದರು.

Advertisement

ವಿವಿಧ ವೈದ್ಯಕೀಯ ವಿಭಾಗಗಳ ಉದ್ಘಾಟನೆ :

ಕೋಲಾರ: ನಗರ ಹೊರ ವಲಯದ ದೇವರಾಜ್‌ ಅರಸು ವೈದ್ಯಕೀಯ ಮಹಾ ವಿದ್ಯಾಲ ಯಕ್ಕೆ ಹೊಂದಿಕೊಂಡಿರುವ ಆರ್‌.ಎಲ್‌. ಜಾಲಪ್ಪ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ದಲ್ಲಿ ಸೋಮವಾರ ಆರ್‌.ಎಲ್‌.ಜಾಲಪ್ಪರವರ 96ನೇ ಜನ್ಮದಿನವನ್ನು 7ನೇ ವರ್ಷದ ಆಸ್ಪತ್ರೆಯ ದಿನಾಚರಣೆಯಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ 20 ವರ್ಷ ಸೇವೆ ಪೂರ್ಣಗೊಳಿಸಿರುವಂತಹ ವೈದ್ಯರಾದ ಡಾ. ಹರೇಂದ್ರ ಕುಮಾರ್‌, ಡಾ.ಶ್ರೀರಾಮುಲು ಪಿ.

ಎನ್‌ ಮತ್ತು ಡಾ.ಅರುಣ್‌ ಹೆಚ್‌.ಎಸ್‌ ಅಲ್ಲದೇ

ಇತರೆ ಸಿಬ್ಬಂದಿಪದ್ಮಾ ನಂದಕುಮಾರ್‌, ರಮಣ, ಚಲಪತಿ, ಜಯರಾಮ್‌ ಎನ್‌.ವಿ ಮತ್ತು ನಾಗರಾಜ್‌ ಅವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಆಸ್ಪತ್ರೆಯಲ್ಲಿ ಎಂಸಿಎಸ್‌ ಬ್ಲಾಕ್‌, ಅಪ್ತಮಾಲಜಿ ಶಸ್ತ್ರಚಿಕಿತ್ಸಾ ಕೊಠಡಿ,ಆಯುಷ್‌ ಒಪಿಡಿ ವಿಭಾಗಗಳನ್ನು ಡಾ.ಎಸ್‌.ಕುಮಾರ್‌ ಕುಲಪತಿಗಳು, ಎಸ್‌ಡಿಯುಎಹೆಚ್‌

ಆರ್‌, ಡಾ.ಸಿ.ಕೆ.ರಂಜನ್‌ ಮತ್ತು ಡಾ. ಮೊಯುದ್ದೀನ್‌ ಕುಟ್ಟಿ ಸಹ ಕುಲಪತಿಗಳು, ಡಾ.ಪ್ರದೀಪ್‌ಕುಮಾರ್‌ಜಿ ಉಪ ಕುಲಪತಿಗಳು ,ಎಸ್‌ಡಿಯುಎಹೆಚ್‌ಆರ್‌, ಡಾ.ಶ್ರೀರಾಮುಲು,ಪ್ರಾಂಶುಪಾಲರು, ಎಸ್‌ಡಿಯುಎಂಸಿ, ಡಾ. ಅಜೀಮ್‌ ಮೋಯುದ್ದೀನ್‌, ವೈದ್ಯಕೀಯ ಅಧೀಕ್ಷಕರು ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಇತರೆ ಸಿಬ್ಬಂದಿ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಲಾಯಿತು. ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.

ಕುಲಪತಿಗಳಾದ ಡಾ. ಎಸ್‌. ಕುಮಾರ್‌, ಸಂಸ್ಥೆಯ ಸಂಸ್ಥಾಪಕರ ದೂರದೃಷ್ಟಿಯನ್ನುಸಾಕಾರಗೊಳಿಸಲು ಸತತವಾಗಿ ಪ್ರಯತ್ನಿಸುತ್ತಿದ್ದೇವೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next