Advertisement

ಶನಿವಾರವೂ ಲಾಕ್‌ಡೌನ್‌ಗೆ ಒತ್ತಾಯ

06:32 AM Jul 07, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಒಂದು ದಿನ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುತ್ತಿದೆ. ಇದನ್ನು ಎರಡು ದಿನಗಳಿಗೆ ವಿಸ್ತರಿಸಬೇ ಕೆಂದು ಬಿಬಿಎಂಪಿ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸೋಂಕು ತಡೆಯುವ ನಿಟ್ಟಿನಲ್ಲಿ  ಸೋಮವಾರ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಕಂದಾಯ ಸಚಿವ ಹಾಗೂ ಕೋವಿಡ್‌-19 ಬೆಂಗಳೂರು ಉಸ್ತುವಾರಿ ಆರ್‌. ಅಶೋಕ್‌ ನೇತೃತ್ವದಲ್ಲಿ 1-70ರವರೆಗಿನ ವಾರ್ಡ್‌ ಗಳ ಪಾಲಿಕೆ ಸದಸ್ಯರ ಜತೆ ನಡೆದ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು. ಸಭೆಯ ಬಳಿಕ ಸಚಿವ ಅಶೋಕ್‌ ಸುದ್ದಿಗಾರರ ಜತೆ ಮಾತನಾಡಿದರು.

Advertisement

ಭಾನುವಾರ ಲಾಕ್‌ಡೌನ್‌ ಜಾರಿ ಮಾಡುತ್ತಿರುವ ಮಾದರಿಯಲ್ಲೇ ಶನಿವಾರವೂ ಲಾಕ್‌ ಡೌನ್‌ ಘೋಷಣೆ ಮಾಡುವಂತೆ ಪಾಲಿಕೆ ಸದಸ್ಯರು ಮನವಿ  ಮಾಡಿದ್ದು, ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಲಾಕ್‌ಡೌನ್‌ ತಡೆಯುವ ನಿಟ್ಟಿನಲ್ಲಿ ಎಲ್ಲ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಲಾಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ  ಉದ್ದೇಶದಿಂದ ಸೋಮವಾರ ಮತ್ತು ಮಂಗಳವಾರ ಸಭೆ ನಡೆಸಲಾಗುತ್ತಿದೆ. ಪಾಲಿಕೆ ಸದಸ್ಯರು ಆಯಾ ವಾರ್ಡ್‌ಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು. ಸದ್ಯ ತುರ್ತು ಪರಿಸ್ಥಿತಿ ಇದೆ. ಹೀಗಾಗಿ, ಎಲ್ಲರು ಪಕ್ಷಾತೀತವಾಗಿ ಸಹಕಾರ  ನೀಡಿದರೆ ಮಾತ್ರಕೋವಿಡ್‌ 19 ವಿರುದ್ಧ ಹೋರಾಡಲು ಸಾಧ್ಯ ಎಂದರು.

ಗರ್ಭಿಣಿಯರಿಗೆ ಆದ್ಯತೆ: ನಗರದಲ್ಲಿ ಕೋವಿಡ್‌ 19  ದೃಢಪಟ್ಟ ಗರ್ಭಿಣಿಯರಿಗೆ ಆದ್ಯತೆಯ ಮೇಲೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ಎರಡು ಪ್ರತ್ಯೇಕ ಕೋವಿಡ್‌ ಆಸ್ಪತ್ರೆಗಳನ್ನು ಮೀಸಲಿಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಪ್ರತಿ ವಾರ್ಡ್‌ಗೂ ವೈದ್ಯಕೀಯ ನಿಧಿಯಡಿ 10 ಲಕ್ಷ ರೂ. ಅನುದಾನ ನೀಡಲಾಗಿದೆ.

ಈ ಮೊತ್ತವನ್ನು ಆದ್ಯತೆ ಮೇರೆಗೆ ಸೋಂಕು  ದೃಢಪಟ್ಟ ಗರ್ಭಿಣಿಯರ ಚಿಕಿತ್ಸೆಗೆ ಹಾಗೂ 20 ಲಕ್ಷ ರೂ. ಅನುದಾನವನ್ನು ಸೀಲ್‌ಡೌನ್‌ ಪ್ರದೇಶದ ಸ್ವತ್ಛತೆ, ಆಯಾ ಪ್ರದೇಶದ ಜನರ ಅಗತ್ಯ ಔಷಧಿ ಪೂರೈಕೆಗೆ ಬಳಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ನಗರದಲ್ಲಿ 250  ಆ್ಯಂಬುಲೆನ್ಸ್‌ ಇದ್ದು, ಇದನ್ನು 400ಕ್ಕೆ ಹೆಚ್ಚಿಸಬೇ ಕು ಎಂದರು. ಸೋಂಕಿ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಗೌರವಯುತವಾಗಿ ಆಗಬೇಕು. ಉಲ್ಲಂ ಸಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.

ಇನ್ನೂ 4 ತಿಂಗಳು ಇದೇ ಸ್ಥಿತಿ: ಅಶೋಕ್‌: ರಾಜ್ಯದಲ್ಲಿ ಇನ್ನೂ ನಾಲ್ಕೈದು ತಿಂಗಳು ಕೋವಿಡ್‌ 19 ಇದೇ ಪರಿಸ್ಥಿತಿ ಇದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ. ಸೋಮವಾರ ಖಾಸಗಿ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಭೆ  ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಬಹಳಷ್ಟು ಬೆಡ್‌ ಗಳು ಖಾಲಿ ಇವೆ. ರೋಗಿಗಳಿಗೆ ಊಟದ ವ್ಯವಸ್ಥೆ ಮತ್ತಿತರ ವ್ಯವಸ್ಥೆ ಕುರಿತು ಸಭೆ ಸೇರಿ ಚರ್ಚೆ ಮಾಡಿದ್ದೇವೆ. ಹೋಂ ಕ್ವಾರಂಟೈನ್‌ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ್ದರಿಂದ ಆಸ್ಪತ್ರೆಗಳಿಗೆ ಸೇರುವ ರೋಗಿಗಳ ಸಂಖ್ಯೆ  ಬಹಳಷ್ಟು ಕಡಿಮೆ ಆಗಿದೆ.

Advertisement

ಬಹಳಷ್ಟು ಸ್ವಯಂ ಸೇವಾ ಸಂಘಟನೆ ಗಳು ಸರ್ಕಾರಕ್ಕೆ ಸೇವೆ ನೆರವು ನೀಡಲು ಮುಂದೆ ಬಂದಿವೆ. ಅವರನ್ನು ಯಾವ ರೀತಿ ಬಳಕೆ  ಮಾಡಿಕೊಳ್ಳಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ. ಇನ್ನು ಸಚಿವರಾದ ಡಾ. ಸುಧಾಕರ್‌, ಶ್ರೀರಾಮುಲು ಮತ್ತು ತಮ್ಮ ನಡುವೆ ಸ್ವಾಮರಸ್ಯ ಇಲ್ಲ ಎನ್ನುವುದು ಸುಳ್ಳು. ನಾನು ಇಪ್ಪತ್ತೆ„ದು ಮೂವತ್ತು ವರ್ಷಗಳಿಂದ  ರಾಜಕಾರಣದಲ್ಲಿ ಇದ್ದೇನೆ. ಹಾಸಿಗೆ ಇದ್ದಷ್ಟು ಕಾಲು ಚಾಚುವ ಸ್ವಭಾವ ನನ್ನದು. ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಸ್ವಭಾವ ನನ್ನದು ಎಂದು ಹೇಳಿದರು.

ಕರೆದಿದ್ದು 75; ಬಂದಿದ್ದು 35!: ಕೋವಿಡ್‌ 19 ಸೋಂಕು ತಡೆಯುವ ನಿಟ್ಟಿನಲ್ಲಿ ಆಯ್ದ 70 ವಾರ್ಡ್‌ಗಳ ಪಾಲಿಕೆ ಸದಸ್ಯರನ್ನು ಸೋಮವಾರ ಸಭೆಗೆ ಕರೆಯಲಾಗಿತ್ತು. ಆದರೆ, ಇದಕ್ಕೆ ಕೇವಲ 35ಜನ ಪಾಲಿಕೆ ಸದಸ್ಯರು ಹಾಜರಾಗಿದ್ದರು.  ಸಭೆಯಲ್ಲಿ ಹಲವು ಗಂಭೀರ ವಿಚಾರಗಳು ಚರ್ಚೆಯಾಗಿವೆ.

ಚಿಕಿತ್ಸೆ ನಿರಾಕರಿಸಿಲ್ಲ: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಗ್ರಾಮಾಂತರ ಹಾಗೂ ನಗರ ಜಿಲ್ಲಾ ವ್ಯಾಪ್ತಿಯ ಪಂಚಾಯಿತಿಗಳಲ್ಲಿನ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಆಯುಕ್ತರು,  ಬಿಬಿಎಂಪಿ ವ್ಯಾಪ್ತಿಯ ಎಲ್ಲ ಆಸ್ಪತ್ರೆಗಳಲ್ಲಿ ಗ್ರಾಮಾಂತರ, ನಗರ ಜಿಲ್ಲಾ ವ್ಯಾಪ್ತಿಯ ಗ್ರಾಪಂಗಳಲ್ಲಿನ ಸೋಂಕಿತರಿಗೂ ಚಿಕಿತ್ಸೆ ನೀಡಲಾಗುವುದು. ಯಾರಿಗೂ ಚಿಕಿತ್ಸೆ ನಿರಾಕರಿಸಿಲ್ಲ. ಹೀಗಾಗಿ, ಯಾರೂ ಆತಂಕಗೊಳ್ಳುವ ಅವಶ್ಯಕತೆಯಿಲ್ಲ  ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next