Advertisement

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

04:26 PM Jan 22, 2020 | Suhan S |

ಹಾನಗಲ್ಲ: ಅಖೀಲ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು ತಹಸೀಲ್ದಾರ್‌ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಗೃಹಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿರುವ 2 ಲಕ್ಷ ರೂ.ಗಳೊಂದಿಗೆ 3 ಲಕ್ಷ ರೂ.ಗಳನ್ನು ಸಾಲದ ರೂಪದಲ್ಲಿ ನೀಡಬೇಕು. ಕಾರ್ಮಿಕರಿಗೆ ಉಪಕರಣ ಖರೀದಿಗೆ ನೀಡುವ 5 ಸಾವಿರ ಸಹಾಯಧನವನ್ನು 2 ಲಕ್ಷಕ್ಕೆ ಹೆಚ್ಚಿಸಬೇಕು. ಮಾಸಿಕ ಪಿಂಚಣಿಯನ್ನು 1 ಸಾವಿರದಿಂದ 3 ಸಾವಿರಕ್ಕೇರಿಸಬೇಕು. ಕಾರ್ಮಿಕ ಆರೋಗ್ಯಭಾಗ್ಯ ಯೋಜನೆಯ ವೈದ್ಯಕೀಯ ಸಹಾಯಧನವನ್ನು 25 ಸಾವಿರಕ್ಕೆ ಹೆಚ್ಚಿಸಬೇಕು. ತಕ್ಷಣಕ್ಕೆ ಬಿಡುಗಡೆಯಾಗಬೇಕು. ಕಾರ್ಮಿಕ ಚಿಕಿತ್ಸಾಭಾಗ್ಯವನ್ನು 2 ಲಕ್ಷದಿಂದ 5 ಲಕ್ಷಕ್ಕೇರಿಸಬೇಕು. ಅಪಘಾತ ಪರಿಹಾರ ಯೋಜನೆಯಲ್ಲಿ ಮೃತಪಟ್ಟ ಕಾರ್ಮಿಕನಿಗೆ ಎಫ್‌ಐಆರ್‌ನ್ನು ಅಂತಿಮವಾಗಿ ಪರಿಗಣಿಸದೇ ಮಧ್ಯಂತರವಾಗಿ ಪರಿಗಣಿಸಬೇಕು. ಕಾರ್ಮಿಕರಿಗೆ ಸರ್ಕಾರದ ಎಲ್ಲ ಸೌಲಭ್ಯಗಳೂ ಇಲಾಖೆ ವ್ಯಾಪ್ತಿಯಲ್ಲಿ ಸಕಾಲಕ್ಕೆ ಒದಗಿಸಬೇಕು.

ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಕ್ರೀಡಾಕೂಟಗಳಿಗೆ ಹತ್ತು ಸಾವಿರ ರೂ. ಸಹಾಯಧನ ನೀಡಬೇಕು. ನರೇಗಾ ಯೋಜನೆಯಲ್ಲಿ ದುಡಿಯುವ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಬಾರದು. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡಬೇಕು. ಕಾರ್ಮಿಕರ ಸಂಘದ ಕಲ್ಯಾಣ ಮಂಡಳಿಗೆ ಸದಸ್ಯರ ಆಯ್ಕೆಯಲ್ಲಿ ನಮ್ಮನ್ನೂ ಪರಿಗಣಿಸಬೇಕು. ಉದ್ಯೋಗ ಪ್ರಮಾಣ ಪತ್ರವನ್ನುಕಾರ್ಮಿಕ ಇಲಾಖೆ ನಿರೀಕ್ಷಕರು, ಮನೆಯ ಮಾಲೀಕರು, ಗುತ್ತಿಗೆದಾರ ನೀಡುವುದನ್ನು ರದ್ದುಗೊಳಿಸಬೇಕು. ಕಾರ್ಮಿಕರ ಸಂಘದ ಕಚೇರಿಗಾಗಿ ಜಿಲ್ಲಾ ಕೇಂದ್ರದಲ್ಲಿ 10 ಗುಂಟೆ ನಿವೇಶನ ನೀಡಬೇಕು. ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿ ಭಟ್ಟಿ, ಹಮಾಲಿಗರು, ಚಿಂದಿ ಆಯುವವರು, ಮನೆ ಕೆಲಸಗಾರರನ್ನು ಕಾರ್ಮಿಕ ಕಲ್ಯಾಣ ಮಂಡಳಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಅಜ್ಜಪ್ಪ ಹಡಪದ, ತಾಲೂಕು ಅಧ್ಯಕ್ಷ ರವಿ ಬಾರ್ಕಿ, ಪ್ರಧಾನ ಕಾರ್ಯದರ್ಶಿ ಹೇಮಗಿರಿ ಅಡಿಗಣ್ಣನವರ, ಪದಾಧಿ ಕಾರಿಗಳಾದ ಶಿವಕುಮಾರ ಹಡಪದ, ಷಣ್ಮುಖಗೌಡ ಪಾಟೀಲ, ನಿಂಗನಗೌಡ ಪಾಟೀಲ, ಜಯನುದ್ದೀನ್‌ ಮಯಜಾವರ, ಪ್ರೇಮಾ ತಂಬುಳಿ, ಪೂರ್ಣಿಮಾ ತೊಗರಳ್ಳಿ, ಸುಭಾಸ ಬಾರ್ಕಿ, ಪುಟ್ಟಪ್ಪ ಕೋಳೂರ, ಪರಶುರಾಮ ಕುಂಟನಹೊಸಳ್ಳಿ, ಬಸನಗೌಡ ಪಾಟೀಲ, ಚಂದ್ರಕಾಂತ ಗೊದಮನಿ, ವೀರಭದ್ರಪ್ಪ ಅಪ್ಪಾಜಿ, ಗಣೇಶ ಕುಮಚಗಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next