Advertisement

ಭ್ರಷ್ಟಾಚಾರ ತನಿಖೆಗೆ ಒತ್ತಾಯ

05:38 PM Dec 16, 2021 | Shwetha M |

ಆಲಮೇಲ: ಕಡಣಿ ಗ್ರಾಪಂನಲ್ಲಿ ಅವ್ಯವಹಾರ ನಡೆದಿದ್ದು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಸದಸ್ಯರು ಹಾಗೂ ಗ್ರಾಮಸ್ಥರು ಬುಧವಾರದಿಂದ ಧರಣಿ ಆರಂಭಿಸಿದ್ದಾರೆ.

Advertisement

ಗ್ರಾಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಕಾಮಗಾರಿ ಮಾಡದೆ ಹಣ ಮಂಜೂರು ಮಾಡಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ಸೂಕ್ತ ತನಿಕೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅದಕ್ಕೆ ಬೇಸತ್ತು ಗ್ರಾಪಂ ಎದುರು ಧರಣಿ ಶುರು ಮಾಡಿದ್ದೇವೆ ಎಂದು ಪ್ರತಿಭಟನಾನಿರರು ಆಕ್ರೋಶ ವ್ಯಕ್ತಪಡಿಸಿದರು.

ಕಡಣಿ ಗ್ರಾಪಂ ವ್ಯಾಪ್ತಿಗೆ ತಾವರಖೇಡ, ತಾರಾಪುರ, ಮದನಹಳ್ಳಿ ಗ್ರಾಮಗಳು ಒಳಪಟ್ಟಿದ್ದು ಗ್ರಾಮಗಳ ಅಭಿವೃದ್ಧಿಗಾಗಿ ಮಂಜುರಾಗಿರುವ 14-15ನೇ ಹಣಕಾಸು ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತ ಕಳಸಗೊಂಡ, ಖಾಜಪ್ಪ ಜಮಾದಾರ, ಸುರೇಶ ಪೂಜಾರಿ, ನೀಲಕಂಟ ವಡ್ಡರ, ರಮೇಶ ಕಿಣಗಿ, ಶಿವರಾಯ ಕಡಣಿ, ಅರುಣ ಕುರಿಮನಿ, ಹುಚ್ಚಪ್ಪ ದೊಡಮನಿ, ಸುರೇಶ ನಾಟೀಕಾರ, ತಾರಾಪುರದ ರೇವಣಿಸಿದ್ದಯ್ಯ ಹಿರೇಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next