Advertisement

ಅಭದ್ರತೆ ಇರುವುದು ಕಾಂಗ್ರೆಸ್ ಗೆ : ಬೊಮ್ಮಾಯಿ

03:38 PM Jun 28, 2021 | Team Udayavani |

ಕಾರ್ಕಳ : ಡಿಕೆ.ಶಿವಕುಮಾರ್ ಅವರು ಸಿಎಂ ಗೆ ಭದ್ರತೆ ಹೆಚ್ಚಿಸಬೇಕೆಂದು ಯಾವ ಆ್ಯಂಗಲ್ ನಲ್ಲಿ ಹೇಳಿದ್ದಾರೆ ಗೊತ್ತಿಲ್ಲ.ಈ ರೀತಿ ಯಾವುದೇ ಗುಪ್ತಚರ ರಿಪೋರ್ಟ್ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಗಳಿಗೆ ಓಡಾಟ ನಡೆಸುತ್ತಿದ್ದಾರೆ. ಅವರು ಜನರ ಮಧ್ಯೆಯಿದ್ದು,ಹೋರಾಟ ಮಾಡಿಕೊಂಡು ಬಂದವರು .ಯಾವಾಗ್ಲೂ ಜನರ ಮಧ್ಯೆ ಇರುವುದಕ್ಕೆ ಯಾವುದೇ ತೊಂದರೆ ಇಲ್ಲ.ಈ ಆತಂಕಗಳೆಲ್ಲ‌ ಕಾಂಗ್ರೆಸ್ ಪಕ್ಷದ್ದು ಈ ಬಗ್ಗೆ ಅವರನ್ನೇ ಕೇಳಿ ಎಂದು ಗ್ರಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

Advertisement

ಕಾರ್ಕಳದಲ್ಲಿ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಜಾರಕಿಹೊಳಿ ಅವರು ಮತ್ತೆ ಮುಂಬೈಗೆ ತೆರಳುವ ಬಗ್ಗೆ ನನಗೇನೂ ಮಾಹಿತಿ ಇಲ್ಲ.ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ರೇಖಾ ಕದಿರೇಶ್ ಹತ್ಯೆ ಕೇಸ್ ನಲ್ಲಿ ಹಲವಾರು ಆಯಾಮಗಳು ತೆರೆದುಕೊಳ್ಳುತ್ತಾ ಇದೆ.ಅವುಗಳನ್ನು‌ ಪೊಲೀಸರು ಕೂಲಂಕುಷವಾಗಿ ತನಿಖೆ ಮಾಡುತ್ತಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧನ ಮಾಡಿದ್ದರಿಂದ ಎಲ್ಲ ವಿಷಯಗಳು ಹೊರಗೆ ಬರುತ್ತೆದೆ. ರಾಜಕೀಯ ಅಥವಾ ವೈಯುಕ್ತಿಕ ಕೊಲೆಯಾ ಎಂದು ತನಿಖೆಯಲ್ಲಿ ಗೊತ್ತಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next