Advertisement

Mangalore: ಬಸ್‌ನಿಂದ ಬಿದ್ದು ಗಾಯ

08:08 PM Aug 03, 2024 | Team Udayavani |

ಮಂಗಳೂರು: ಖಾಸಗಿ ಸಿಟಿ ಬಸ್‌ನಿಂದ ಬಿದ್ದು ಪ್ರಯಾಣಿಕರೋರ್ವರು ಗಾಯಗೊಂಡ ಘಟನೆ ಕದ್ರಿಯಲ್ಲಿ ಸಂಭವಿಸಿದೆ.

Advertisement

ಎಂ. ಹರೀಶ್ಚಂದ್ರ ಶೆಟ್ಟಿ (72) ಗಾಯಗೊಂಡವರು. ಅವರು ಜು. 31ರಂದು ಕಂಕನಾಡಿಯಿಂದ ಕದ್ರಿಕಂಬಕ್ಕೆ ಹೋಗಲು ಕಂಕನಾಡಿ ಬಸ್‌ ನಿಲ್ದಾಣದಿಂದ ಖಾಸಗಿ ಸಿಟಿ ಬಸ್‌ನಲ್ಲಿ ಹೋಗುತ್ತಿದ್ದರು. ಸರ್ಕ್ನೂಟ್‌ ಹೌಸ್‌ ಗೇಟ್‌ ಮುಂಭಾಗ ಬಸ್‌ನಿಂದ ಇಳಿಯುತ್ತಿದ್ದಾಗ ಚಾಲಕ ತೌಸೀಫ್ ನಿರ್ಲಕ್ಷ್ಯತನದಿಂದ ಬಸ್‌ ಮುಂದಕ್ಕೆ ಚಲಾಯಿಸಿದ ಪರಿಣಾಮ ಹರೀಶ್ಚಂದ್ರ ಶೆಟ್ಟಿ ಅವರು ಕೆಳಗೆ ಬಿದ್ದು ಹಣೆ, ಕೆನ್ನೆ ಮತ್ತು ಬಾಯಿಗೆ ಗಾಯವಾಗಿದೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next