Advertisement

ಅಭಿವೃದ್ಧಿ ಕಾಮಗಾರಿಗೆ ಚಾಲನೆ

04:27 AM May 17, 2020 | Lakshmi GovindaRaj |

ಮೈಸೂರು: ನಗರದ ಕೃಷ್ಣರಾಜ ಕ್ಷೇತ್ರದ ವಾರ್ಡ್‌ ನಂ.49ರಲ್ಲಿ 45 ಲಕ್ಷ ವೆಚ್ಚದ ವಿವಿಧ ಕಾಮಗಾರಿಗೆ ಶಾಸಕ ಎಸ್‌.ಎ. ರಾಮದಾಸ್‌ ಚಾಲನೆ ನೀಡಿದರು.

Advertisement

ಶನಿವಾರ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ 49 ಲಕ್ಷ್ಮೀಪುರಂ ಭಾಗದಲ್ಲಿ 25  ಲಕ್ಷ ರೂ., ಬಸವೇಶ್ವರ ರಸ್ತೆಯ 10 ಮತ್ತು 11ನೇ ಕ್ರಾಸ್‌ ಮತ್ತು ಚಾಮರಾಜಪುರಂನಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ, ವಿಷ್ಣುವರ್ಧನ್‌ ರಸ್ತೆ ಮತ್ತು ಮಹೇಶ್‌ ಪ್ರಸಾದ್‌ ಹೋಟೆಲ್‌ ಹಿಂಭಾ ಗದ ರಸ್ತೆಗಳಲ್ಲಿ ಇಂಟರ್‌ ಲಾಕಿಂಗ್‌ ಕಾಮಗಾರಿಗೆ ಶಾಸಕ  ಎಸ್‌.ಎ. ರಾಮದಾಸ್‌ ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯೆ ಸೌಮ್ಯ ಉಮೇಶ್‌, ಮುಖಂಡ ರಾದ ರಮೇಶ್‌, ಹರೀಶ್‌ ಬಲ್ಲಾಳ್‌, ಕೃಷ್ಣಪ್ಪ, ನಾಗೇಂದ್ರ, ಸುಬ್ಬಣ್ಣ,  ಬಾಬು, ಆನಂದ್‌, ಅಡ್ವೊಕೇಟ್‌ ಭಾಗ್ಯಮ್ಮ ವೆಂಕಟೇಶ್‌, ಮಹದೇವು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next