Advertisement

ಮಳೆ: ವನಿತಾ ಟಿ20 ಪಂದ್ಯ ರದ್ದು

06:00 AM Sep 22, 2018 | Team Udayavani |

ಕೊಲಂಬೊ: ಆತಿಥೇಯ ಶ್ರೀಲಂಕಾ ಹಾಗೂ ಭಾರತ ವನಿತಾ ತಂಡಗಳ ನಡುವಿನ ಶುಕ್ರವಾರದ ದ್ವಿತೀಯ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡಿದೆ. 

Advertisement

ಮಳೆಯಿಂದಾಗಿ ಪಂದ್ಯ ನಿಂತಾಗ ಮೊದಲು ಬ್ಯಾಟಿಂಗ್‌ ನಡೆಸುತ್ತಿದ್ದ ಶ್ರೀಲಂಕಾ 7.5 ಓವರ್‌ಗಳಲ್ಲಿ 3 ವಿಕೆಟಿಗೆ 49 ರನ್‌ ಗಳಿಸಿತ್ತು. ಯಶೋದಾ ಮೆಂಡಿಸ್‌ (1), ನಾಯಕಿ ಚಾಮರಿ ಜಯಾಂಗನಿ (21) ಮತ್ತು ಕವಿಶಾ ದಿಲ್ಹಾರಿ (3) ಔಟಾಗಿ ಪೆವಿಲಿಯನ್‌ ಸೇರಿದ್ದರು. ಈ ವಿಕೆಟ್‌ ಅರುಂಧತಿ ರೆಡ್ಡಿ, ದೀಪ್ತಿ ಶರ್ಮ ಹಾಗೂ ಪೂನಂ ಯಾದವ್‌ ಪಾಲಾಗಿತ್ತು. 15 ರನ್‌ ಮಾಡಿದ್ದ ಸುರಂಗಿಕಾ ಕ್ರೀಸಿನಲ್ಲಿದ್ದರು. ಮೊದಲ ಪಂದ್ಯ ಜಯಿಸಿದ್ದ ಭಾರತ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next