Advertisement

ಸಿಎಂ ಪರಿಹಾರ ನಿಧಿಗೆ ಕೈಗಾರಿಕೆಗಳಿಂದ ನೆರವು

12:24 PM Aug 22, 2018 | |

ಬೆಂಗಳೂರು: ಕೊಡಗು ಸೇರಿದಂತೆ ರಾಜ್ಯಾದ್ಯಂತ ಮಳೆಯಿಂದ ಕಂಗೆಟ್ಟಿರುವ ಜನರ ನೆರವಿಗೆ ವಿವಿಧ ಕೈಗಾರಿಕೆಗಳು, ಉದ್ಯಮಿಗಳು ಮುಂದಾಗಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿ ಹಾಗೂ ವಿಕೋಪ ಪರಿಹಾರ ನಿಧಿಗೆ ಹಣ ನೀಡುತ್ತಿದ್ದಾರೆ.

Advertisement

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ನೇತೃತ್ವದಲ್ಲಿ ಭೇಟಿಯಾದ ಎಂಎಸ್‌ಐಲ್‌ ಮತ್ತು ಎಂಸಿಎ ಉದ್ಯಮಗಳು ಕೊಡಗು ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ಒಂದು ಕೋಟಿ ರೂ. ಮೊತ್ತದ ಚೆಕ್‌ ನೀಡಿದವು. ಅಲ್ಲದೆ, ಮೈಸೂರು ಎಲೆಕ್ಟ್ರಿಕಲ್ಸ್‌ ಕೂಡ 25 ಲಕ್ಷ ರೂ.ನ ಚೆಕ್‌ ನೀಡಿದೆ.

ಇದೇ ವೇಳೆ ಕಾರ್ಪೋರೇಷನ್‌ ಬ್ಯಾಂಕ್‌ ಮತ್ತು ಓರಿಯೆಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ಗಳೂ ತಲಾ ಒಂದು ಕೋಟಿ ರೂ. ಮೊತ್ತದ ಚೆಕ್‌ ನೀಡಿವೆ. ಅಲ್ಲದೆ, ವೆಂಕಟರಾಮ್‌ ಎಂಬ ವ್ಯಕ್ತಿಯೊಬ್ಬರು ತಮ್ಮ ಮೂರು ತಿಂಗಳ ಪಿಂಚಣಿ ಮೊತ್ತದ ಚೆಕ್‌ಅನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು. 

ನಂತರ ಸಿಎಂ ಕುಮಾರಸ್ವಾಮಿ ಮಾತನಾಡಿ, ವಿಕೋಪ ಪರಿಹಾರಕ್ಕಾಗಿ ನೆರವು ನೀಡಲು ಅನೇಕ ಕಾರ್ಪೋರೆಟ್‌ ಕಂಪನಿಗಳು ಮುಂದೆ ಬಂದಿದ್ದು, ಈಗಾಗಲೇ ಅವುಗಳ ಮುಖ್ಯಸ್ಥರು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಇದೇ ರೀತಿ ಸಾರ್ವಜನಿಕರೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next