Advertisement

ಬೈಕುಲಾ ಜೈಲಲ್ಲಿ ದೊಂಬಿ: ಇಂದ್ರಾಣಿ ಸಹಿತ 200 ಮಂದಿ ವಿರುದ್ದ ಕೇಸು

03:22 PM Jun 26, 2017 | Team Udayavani |

ಮುಂಬಯಿ : ಜೈಲಿನ ಮಹಿಳಾ ಕೈದಿಯ ಸಾವನ್ನು ಅನುಸರಿಸಿ ನಡೆದ ದೊಂಬಿಗೆ ಸಂಬಂಧಿಸಿ ಪೊಲೀಸರು ಶೀನಾ ಬೋರಾ ಕೊಲೆ ಕೇಸಿನ ಪ್ರಧಾನ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಸಹಿತ ಸುಮಾರು 200 ಮಂದಿ ಬೈಕುಲಾ ಜೈಲುವಾಸಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. 

Advertisement

ಬೈಕುಲಾ ಜೈಲಿನಲ್ಲಿ  ಮಹಿಳಾ ಜೈಲು ಅಧಿಕಾರಿ ಮಾರಣಾಂತಿಕವಾಗಿ ಹೊಡೆದ ಪರಿಣಾಮವಾಗಿ ಮಹಿಳಾ ಕೈದಿ 45ರ ಹರೆಯದ ಮಂಜು ಗೋವಿಂದ ಶೆಟ್ಟೇ ಎಂಬಾಕೆ ಕಳೆದ ಶುಕ್ರವಾರ ಜೆ ಜೆ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. 

ಈ ಘಟನೆಗೆ ಸಂಬಂಧಿಸಿ ಆರು ಮಂದಿ ಜೈಲು ಸಿಬಂದಿಗಳನ್ನು ಅಮಾನತು ಮಾಡಲಾಗಿತ್ತು ಮತ್ತು ಪೊಲೀಸರು ನಿನ್ನೆ ಭಾನವಾರ ಅವರ ವಿರುದ್ಧ ಐಪಿಸಿ ಸೆ.302 (ಕೊಲೆ ಕೃತ್ಯಕ್ಕೆ ಶಿಕ್ಷೆ) ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. 

ಶೆಟ್ಟೇ ಸಾವಪ್ಪಿದ ಕಾರಣ ಬೈಕುಲಾ ಜೈಲುವಾಸಿಗಳಾಗಿರುವ ಸುಮಾರು 200 ಮಹಿಳೆಯರು ಶನಿವಾರ ಬೆಳಗ್ಗಿನಿಂದಲೇ ಪ್ರತಿಭಟನೆ ನಿರತರಾಗಿದ್ದರು. ಕೆಲ ಕೈದಿಗಳು ಜೈಲಿನ ಸೂರನ್ನು ಏರಿದ್ದರು. ಕೆಲವರು ಸುದ್ದಿ ಪತ್ರಿಕೆಗಳನ್ನು ಸುಟ್ಟು ಹಾಕಿದ್ದರು. ಬೈಕುಲಾ ಜೈಲಿನಲ್ಲಿ  251 ಮಂದಿ ಮಹಿಳಾ ಕೈದಿಗಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next