Advertisement

ಪ್ರಕೃತಿ ವಿಕೋಪಕ್ಕೆ ಮನುಷ್ಯನ ತಪ್ಪುಗಳೇ ಪರೋಕ್ಷ ಕಾರಣ: ಹೈಕೋರ್ಟ್‌

07:00 AM Aug 21, 2018 | Team Udayavani |

ಬೆಂಗಳೂರು: ಕೇರಳ ಹಾಗೂ ಕೊಡಗಿನ ಪ್ರವಾಹ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ಪ್ರಕೃತಿಯ ಈ ವಿಕೋಪಕ್ಕೆ ಮನುಷ್ಯನ ತಪ್ಪುಗಳು ಪರೋಕ್ಷ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಸಮೀಪ ನಡೆಯುತ್ತಿರುವ ಕಲ್ಲು ಕ್ವಾರಿಯಿಂದ ಸಮೀಪದ ಹಳ್ಳದ ನೀರು ಕಲುಷಿತಗೊಳ್ಳುತ್ತಿದೆ. ಹೀಗಾಗಿ ಕಲುಷಿತ ನೀರು ಬಿಡದಂತೆ ಕ್ರಮ ವಹಿಸುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಶ್ರೀಶಾ ನಾಯಕ್‌ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೋಮವಾರ ಮುಖ್ಯನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ಕೇರಳ ಹಾಗೂ ಕೊಡಗಿನ ಪ್ರವಾಹ ಪರಿಸ್ಥಿತಿ ಪ್ರಸ್ತಾಪಿಸಿದ ಮುಖ್ಯನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ, ಎರಡೂ ಕಡೆ ಭೂ ಕಂಪನ ಆಗಿದ್ದರೆ ಭೂ ಗರ್ಭದ ವ್ಯತ್ಯಯಗಳಿಂದ ಏಕಾಏಕಿ ಆಗಿದೆ ಎನ್ನಬಹುದಿತ್ತು. ಆದರೆ, ಎರಡೂ ಕಡೆ ಬೆಟ್ಟಗುಡ್ಡಗಳು ಕುಸಿಯುತ್ತಿವೆ. ಪ್ರವಾಹದಿಂದಾಗಿ ಉಕ್ಕಿ ಹರಿಯುತ್ತಿರುವ ನೀರಿನಿಂದ ಉಂಟಾಗುತ್ತಿರುವ ವಿಪತ್ತಿಗೆ ಪರೋಕ್ಷವಾಗಿ ಮನುಷ್ಯರ ತಪ್ಪುಗಳು ಕಾರಣ. ನಾವೆಲ್ಲರೂ ಎಚ್ಚೆತ್ತು¤ಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next