Advertisement

ಜಸ್ಟಿಸ್‌ ರೆಡ್ಡಿ ಯನ್ನು ಬಿಟ್ಟು ಹಾರಿದ ಇಂಡಿಗೋ ವಿಮಾನ; ಕ್ಷಮೆಯಾಚನೆ

11:36 AM Nov 07, 2018 | udayavani editorial |

ಹೈದರಾಬಾದ್‌ : ಪಟ್ನಾ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶ ಹಾಗೂ ಪ್ರಕೃತ ಸೆಂಟ್ರಲ್‌ ಅಡ್ಮಿನಿಸ್ಟ್ರೇಟೀವ್‌ ಟ್ರಿಬ್ಯುನಲ್‌ (CAT) ಇದರ ಅಧ್ಯಕ್ಷರಾಗಿರುವ ಜಸ್ಟಿಸ್‌ ಎಲ್‌ ನರಸಿಂಹ ರೆಡ್ಡಿ ಅವರನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಪ್ರಯಾಣಿಸಿದ ಇಂಡಿಗೋ ಫ್ಲೈಟ್‌ ತನ್ನಿಂದಾದ ಲೋಪಕ್ಕೆ  ಕ್ಷಮೆಯಾಚಿಸಿರುವ ಘಟನೆ ವರದಿಯಾಗಿದೆ.

Advertisement

ತನ್ನ ಬಳಿ ಬೋರ್ಡಿಂಗ್‌ ಪಾಸ್‌ ಇದ್ದಾಗ್ಯೂ ತಾನು ಪ್ರಯಾಣಿಕಸಬೇಕಿದ್ದ ಇಂಡಿಗೋ ವಿಮಾನವನ್ನು ಹತ್ತಲು ತನಗೆ ಬಿಡಲಾಗಿಲ್ಲ ಎಂದು ಜಸ್ಟಿಸ್‌ ರೆಡ್ಡಿ ಹೇಳಿದ್ದಾರೆ.

ಜಸ್ಟಿಸ್‌ ರೆಡ್ಡಿ   ಕಳೆದ ಸೋಮವಾರ ಇಲ್ಲಿಂದ  ಬೆಂಗಳೂರಿಗೆ ಹೋಗಲು ಇಂಡಿಗೋ ವಿಮಾನ ಏರಬೇಕಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಪ್ರಮಾದಕ್ಕಾಗಿ ಇಂಡಿಗೋ ಏರ್‌ ಲೈನ್ಸ್‌ ಕ್ಷಮೆಯಾಚಿಸಿದೆ ಎಂದು ಮೂಲಗಳು ತಿಳಿಸಿವೆ. 

ರೆಡ್ಡಿ ಅವರು ಬೋರ್ಡಿಂಗ್‌ ಗೇಟ್‌ ಮೂಲಕ ಸಾಗಬೇಕಿದ್ದ ವೇಳೆ ಕೊನೇ ಕ್ಷಣದಲ್ಲಿ ಅವರು ನೀರಿನ ಬಾಟಲು ಖರೀದಿಸಲು ಹೋಗಿದ್ದರು. ಅಲ್ಲಿಂದ ಮರಳಿ ಬರುವಷ್ಟರಲ್ಲಿ ಬೋರ್ಡಿಂಗ್‌ ಗೇಟ್‌ ಬಂದ್‌ ಆಗಿತ್ತು. ಅಲ್ಲಿದ್ದ ಸಿಬಂದಿಗಳು ರೆಡ್ಡಿ ಅವರಿಗಾಗಿ ಯಾವುದೇ ರಿಯಾಯಿತಿ ತೋರಲಿಲ್ಲ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next