Advertisement

ರೈಲು ದುರಂತ:12 ಗಂಟೆ,4 ಅವಘಡ

10:13 AM Nov 25, 2017 | Team Udayavani |

ಲಕ್ನೋ: ಪಾಟ್ನಾಗೆ ಹೊರಟಿದ್ದ ಪ್ರಯಾಣಿಕ ರೈಲೊಂದು ಉತ್ತರಪ್ರದೇಶದ ಮಣಿಕ್‌ಪುರ ರೈಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿದ ಪರಿಣಾಮ, ಮೂವರು ಮೃತಪಟ್ಟು, 9 ಮಂದಿ ಗಾಯ ಗೊಂಡ ಘಟನೆ ಶುಕ್ರವಾರ ನಡೆದಿದೆ. ಮೃತರ ಪೈಕಿ 6ರ ಬಾಲಕ ಮತ್ತು ಆತನ ತಂದೆ ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಗೋವಾದಿಂದ ಪಟ್ನಾಗೆ ತೆರಳುತ್ತಿದ್ದ ವಾಸ್ಕೋಡ ಗಾಮ ಎಕ್ಸ್‌ಪ್ರೆಸ್‌ನ 13 ಬೋಗಿಗಳು ನಿಲ್ದಾಣದಿಂದ ಸ್ವಲ್ಪ ದೂರ ಹೋಗುತ್ತಲೇ ಬೆಳಿಗ್ಗೆ 4.18ರ ಸಮಯದಲ್ಲಿ ಹಳಿ ತಪ್ಪಿವೆ. ಮಣಿಕ್‌ಪುರ ರೈಲು ನಿಲ್ದಾಣದಿಂದ ಆಗಷ್ಟೇ ಹೊರಟಿದ್ದ ಕಾರಣ ರೈಲು ನಿಧಾನವಾಗಿ ಚಲಿಸುತ್ತಿತ್ತು. ಹೀಗಾಗಿ, ಸಾವು-ನೋವಿನ ಪ್ರಮಾಣ ಕಡಿಮೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಳಿಯಲ್ಲಿನ ಬಿರುಕೇ ಅವಘಡಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ತನಿಖೆ ನಂತರ ನಿಖರ ಕಾರಣ ತಿಳಿದುಬರಲಿದೆ. ವಿಧ್ವಂಸಕ ಕೃತ್ಯವೇ ಎಂಬ ದಿಕ್ಕಿನಲ್ಲೂ ತನಿಖೆ ನಡೆಸಲಾಗು ತ್ತಿದ್ದು, ಉಗ್ರ ನಿಗ್ರಹ ದಳದ ಅಧಿಕಾರಿ ಗಳು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ದ್ದಾರೆ. 

ಪರಿಹಾರ ಘೋಷಣೆ
 ಇದೇ ವೇಳೆ, ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ., ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂ. ಹಾಗೂ ಸಣ್ಣ ಪ್ರಮಾಣದ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಉತ್ತರಪ್ರದೇಶದ ಸಿಎಂ ಯೋಗಿ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

12 ಗಂಟೆ,4 ಅವಘಡ
ಕೇವಲ 12 ಗಂಟೆಗಳ ಅವಧಿಯಲ್ಲಿ 4 ರೈಲು ಅವಘಡಗಳು ಸಂಭವಿಸಿದ್ದು, ಈ ಪೈಕಿ ಮೂರು ಉತ್ತರಪ್ರದೇಶದಲ್ಲೇ ನಡೆದಿರು ವುದು ವಿಶೇಷ. ಗುರುವಾರವಷ್ಟೇ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ಕಾರೊಂದಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದರು. ಶುಕ್ರವಾರ ಸಹರಣ್‌ಪುರದಲ್ಲಿ ಜಮ್ಮು-ಪಾಟ್ನಾ ಅರ್ಚನಾ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಬೋಗಿ ಯಿಂದ ಪ್ರತ್ಯೇಕವಾಗಿ ಹೋದ ಘಟನೆ ನಡೆದಿದ್ದರೆ, ಒಡಿಶಾದಲ್ಲೂ ಸರಕು ರೈಲೊಂದು ಹಳಿ ತಪ್ಪಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next