Advertisement

ಪಾಕ್‌ನಲ್ಲಿ ಭಾರತೀಯ ಕೈದಿ ಸಾವು

12:35 AM May 09, 2023 | Team Udayavani |

ಕರಾಚಿ: ಮೇ 12ರಂದು ವಾಘಾ ಗಡಿಯಲ್ಲಿ ಭಾರತದ 199 ಮೀನುಗಾರರನ್ನು ಬಿಡುಗಡೆ ಮಾಡಲು ಪಾಕಿಸ್ಥಾನ ಸಿದ್ಧತೆ ಮಾಡಿಕೊಂಡಿದೆ. ಇದರ ಮಧ್ಯೆ ಭಾರತೀಯ ಕೈದಿ ಜುಲ್ಫಿಕರ್‌ ಕರಾಚಿಯಲ್ಲಿ ಮೃತಪಟ್ಟಿದ್ದಾರೆ.

Advertisement

ತೀವ್ರ ಜ್ವರ ಬಂದಿದ್ದರಿಂದ ಶ್ವಾಸಕೋಶದ ಸೋಂಕುಂಟಾಗಿ ಸಾವನ್ನಪ್ಪಿದ್ದಾರೆ ಎಂದು ಜೈಲಧಿಕಾರಿಗಳು ಹೇಳಿದ್ದರೂ, ಎಧಿ ವೆಲ್ಫೆರ್‌ ಟ್ರಸ್ಟ್‌ನ ಅಧಿಕಾರಿಯೊಬ್ಬರು ಬೇರೆಯದ್ದೇ ಮಾಹಿತಿ ನೀಡಿದ್ದಾರೆ.

ಲಂಢಿ, ಮಲಿರ್‌ ಬಂದೀಖಾನೆಗಳಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಕಳಪೆ ಆರೋಗ್ಯ, ದೀರ್ಘ‌ಕಾಲೀನ ಕಾಯಿಲೆಗಳನ್ನು ಹೊಂದಿರುವ ಕೈದಿಗಳು ಇಲ್ಲಿಗೆ ಬಂದರೆ ಸಾವನ್ನಪ್ಪುವುದು ಖಚಿತ ಎಂದು ಹೇಳಿದ್ದಾರೆ. ಎರಡೂ ದೇಶಗಳ ಜಲ ಸರಹದ್ದನ್ನು ದಾಟಿ ಮೀನುಗಾರಿಕೆ ಮಾಡಿದ ಮೀನುಗಾರರನ್ನು ಪಾಕ್‌ ಬಂಧಿಸಿತ್ತು. ಪರಸ್ಪರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ 199 ಮಂದಿಯನ್ನು ಬಿಡುಗಡೆ ಮಾಡಲು ಪಾಕ್‌ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next