Advertisement

Italy; ಕೈ ತುಂಡಾದ ಭಾರತೀಯ ವಲಸಿಗನನ್ನು ರಸ್ತೆ ಬಳಿ ಬಿಟ್ಟು ಹೋದ ವ್ಯಕ್ತಿ!

01:11 AM Jun 24, 2024 | Team Udayavani |

ರೋಮ್‌: ತೀವ್ರವಾಗಿ ಗಾಯ ಗೊಂಡಿದ್ದ ಭಾರತೀಯ ವಲಸಿಗ ಕೃಷಿ ಕಾರ್ಮಿಕನಿಗೆ, ಮಾಲಕ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿಲ್ಲ. ಪರಿಣಾಮ ಕೃಷಿ ಕಾರ್ಮಿಕ ಮೃತಪಟ್ಟ ಘಟನೆ ಇಟಲಿಯ ರೋಮ್‌ ಬಳಿ ನಡೆದಿದೆ. ಈ ಘಟನೆ ಖಂಡಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಇದು ಅಮಾನವೀಯ ಕೃತ್ಯ ಎಂದಿದ್ದಾರೆ. ಇಟಲಿಯ ಕಾರ್ಮಿಕ ಸಂಘಟನೆಯೊಂದು ಮುಷ್ಕರ ಕೂಡ ನಡೆಸಿದೆ.

Advertisement

ಏನಾಗಿತ್ತು?: ರೋಮ್‌ ಸಮೀಪದ ಲಾಜಿಯೊ ಎಂಬಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವಲಸಿಗ ಸತ್ನಾಮ್‌ ಸಿಂಗ್‌, ಕೃಷಿ ಯಂತ್ರಕ್ಕೆ ಸಿಲುಕಿ ಗಾಯಗೊಂಡಿದ್ದರು. ಅವರ ಕೈ ಮತ್ತು ಕಾಲು ಯಂತ್ರದಲ್ಲಿ ಸಿಲುಕಿತ್ತು. ಈ ವೇಳೆ ಅವರ ಕೈ ತುಂಡಾಗಿತ್ತು. ಮಾಲಕ ವೈದ್ಯಕೀಯ ಚಿಕಿತ್ಸೆ ಒದಗಿಸದೆ, ಸತ್ನಾಮ್‌ ಸಿಂಗ್‌ ಮತ್ತು ಅವರ ಪತ್ನಿಯನ್ನು ರಸ್ತೆ ಪಕ್ಕದಲ್ಲಿ ಇಳಿಸಿದ್ದರು. ಬೇರ್ಪಟ್ಟ ಕೈಯನ್ನು ಹಣ್ಣಿನ ಪೆಟ್ಟಿಗೆಯಲ್ಲಿ ಪ್ಯಾಕ್‌ ಮಾಡಲಾಗಿತ್ತು. ಒಂದೂವರೆ ಗಂಟೆ ಬಳಿಕ ವೈದ್ಯಕೀಯ ತಂಡವು ಸ್ಥಳಕ್ಕೆ ಆಗಮಿಸಿ, ಅವರನ್ನು ರೋಮ್‌ನ ಆಸ್ಪತ್ರೆಗೆ ಏರ್‌ ಲಿಫ್ಟ್ ಮಾಡಿತು. ಆದರೆ ಅವರು ಬದುಕುಳಿಯಲಿಲ್ಲ. ಸಿಂಗ್‌ ಮಾಲಕನ ವಿರುದ್ಧ ಇಟಲಿ ಪೊಲೀಸರು ನರಹತ್ಯೆ ಕೇಸ್‌ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next