Advertisement

ಭಾರತದ ಮೊದಲ ಮಹಿಳಾ ಛಾಯಾಚಿತ್ರಗಾರ್ತಿ ಹೋಮೈ ವ್ಯರವಾಲ್ಲಾ

09:07 PM Aug 19, 2020 | Karthik A |

ಜಗತ್ತು ಎಷ್ಟು ಸುಂದರ. ಬೆಟ್ಟ, ಗುಡ್ಡ, ಹರಿವ ತೊರೆಗಳು, ಕಂಗೊಳಿಸುವ ಪರ್ವತ ಸಾಲು, ಅಸಂಖ್ಯಾತ ಜೀವ ಸಂಕುಲ, ಪ್ರಕೃತಿ ವಿಸ್ಮಯಗಳನ್ನು ನಮ್ಮ ಸ್ಮತಿ ಪಟಲದಲ್ಲಿ ಉಳಿಯುವಂತೆ ಮಾಡುವ ಛಾಯಾಚಿತ್ರ ಮಾನವ ಸಂಶೋಧನೆಯಲ್ಲಿ ಅತ್ಯಂತ ಮಹತ್ವ ಸ್ಥಾನವನ್ನು ಪಡೆದಿದೆ.

Advertisement

ತೆಗೆಯುವ ಫೋಟೋ ಹಿಂದೆ ಅದೆಷ್ಟೋ ಪರಿಶ್ರಮ ಅಡಕವಾಗಿರುತ್ತದೆ.

ಹೋಮೈ ವ್ಯರವಾಲ್ಲಾ ಈ ಹೆಸರನ್ನು ನೀವು ಕೇಳಿರಬಹುದು. ಈಕೆ ಇನ್ಯಾರು ಅಲ್ಲ ಭಾರತದ ಮೊದಲ ಮಹಿಳಾ ಫೋಟೋ ಜರ್ನಲಿಸ್ಟ್‌ .

1913ರ ಡಿಸೆಂಬರ್‌ 9ರಂದು ಗುಜರಾತ್‌ನ ಪಾರ್ಸಿ ಕುಟುಂಬದಲ್ಲಿ ಜನಿಸಿದ ಇವರು ಹೆಚ್ಚಿನ ಶಿಕ್ಷಣವನ್ನು ಮುಂಬಯಿನಲ್ಲಿ ಪೂರೈಸಿದರು.

ಸವಾಲಿನೊಂದಿಗಿನ ಸೆಣೆಸಾಟ
ಲಿಂಗ ತಾರತಮ್ಯ, ಸಂಪ್ರದಾಯಿಕ ಕಟ್ಟುಪಾಡುಗಳೊಂದಿಗೆ ವಿಶ್ವವನ್ನೇ ನಿಬ್ಬೆರಗಾಗಿಸುವ ಜಾಗತಿಕ ಯುದ್ಧ, ಸ್ವಾತಂತ್ರ್ಯ ಸಂಗ್ರಾಮ ಈಕೆ ಛಯಾಗ್ರಾಹಕಿಯಾಗಲು ಒಂದು ಸವಾಲೇ ಆಗಿತ್ತು. 1930ರಲ್ಲಿ ತಮ್ಮ ಛಾಯಾಗ್ರಹಣ ವೃತ್ತಿ ಆರಂಭಿಸಿದ ಇವರು ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಛಾಯಚಿತ್ರ ಸಂಗ್ರಹಿಸಿದ್ದು ಇಂದಿಗೂ ಅವು ಚಳುವಳಿಯ ಸಾಕ್ಷ್ಯರೂಪಕಗಳಾಗಿವೆ.

Advertisement

ಬರೀ ಹೋರಾಟ ಮಾತ್ರವಲ್ಲದೆ ಕಣಿವೆ, ಪರಿಸರ ಛಾಯಚಿತ್ರಗಳನ್ನೂ ಇವರು ಹೆಚ್ಚಾಗಿ ಇಷ್ಟಪಡುತ್ತಿದ್ದರಂತೆ. ಕೆಮರಾ ತಲೆಬುಡ ಗೊತ್ತಿಲ್ಲದಿದ್ದ ಅಂದಿನ ಜನಸಾಮಾನ್ಯರ ನಡುವೆ 2ನೇ ಜಾಗತಿಕ ಯುದ್ಧದ ಕಾಲದಲ್ಲಿ ವಾರಪತ್ರಿಕೆ ಎನಿಸಿದ “ದಿ ಲಸ್ಟರೆಟೆಡ್‌ ವಿಕ್ಲಿ ಆಫ್ ಇಂಡಿಯಾ’ ದಲ್ಲಿ ಅಧಿಕೃತವಾಗಿ ಕೆಲಸ ಆರಂಭಿಸಿದರು.

ಸ್ವಾತಂತ್ರ್ಯ ಸಂಗ್ರಾಮದ ಕಾಲಾವಧಿಯಲ್ಲಿ ಮಹಾತ್ಮ ಗಾಂಧೀಜಿ, ನೆಹರೂ ಮುಂತಾದ ರಾಷ್ಟ್ರ ನಾಯಕರೊಂದಿಗೆ ಒಡನಾಟಹೊಂದಿದ್ದು ಆ ಕಾಲಾವಧಿಯ ಚಿತ್ರ ಸಂಗ್ರಹದಲ್ಲಿ ಪ್ರಮುಖ ಸ್ಥಾನ ಹೊಂದಿದ್ದಾರೆ. ಬಳಿಕ “ಲೈಫ್’ ಎಂಬ ನಿಯತಕಾಲಿಕೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದು ಬ್ರಿಟೀಷ್‌ ಮಾಹಿತಿ ಕಾರ್ಯಾಗಾರದಲ್ಲೂ (ಇ‌ನ್ಫಾರ್ಮೇಷನ್‌ ಸರ್ವಿಸಸ್‌) ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಗೆ 2010ರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ “ಜೀವಮಾನ ಸಾಧನೆ ಪ್ರಶಸ್ತಿ’ ಲಭಿಸಿದೆ.

ಇವರ ಜನ್ಮದಿನದ 104ರ ಸಂಭ್ರಮಕ್ಕೆ ಗೂಗಲ್‌ ಡೂಡಲ್‌ನಲ್ಲಿ ಫ‌ಸ್ಟ್‌ ಲೇಡಿ ಆಫ್ ಲೆನ್ಸ್‌ ಎಂಬ ಹೆಗ್ಗಳಿಕೆಯನ್ನು ಸಹ ನೀಡಿದೆ. ಅತ್ಯತ್ತಮ ಮಹಿಳಾ ಮಾಧ್ಯಮ ಸಾಧಕಿ ಎನಿಸಿರುವ ಇವರಿಗೆ ಚಮಲ್‌ ದೇವಿ ಜೈನ್‌ ಪ್ರಶಸ್ತಿ, 2011ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯೂ ಸಂದಿದೆ.

13ರ ನೆನಪು
ಇವರ ಛಾಯಾಗ್ರಹಣದ ಮತ್ತೂಂದು ವಿಶೇಷತೆಯೆಂದರೆ ಸಂಗ್ರಹಿಸಿದ ಛಾಯಾಚಿತ್ರವೆಲ್ಲವೂ “ದಲದ್‌13′ ಎಂಬ ನಾಮಾಂಕಿತದಲ್ಲಿ ಪ್ರಕಟಿಸಲಾಗುತ್ತಿತ್ತು. ಆಕೆ ಜನಿಸಿದ್ದು, ಪತಿಯನ್ನು ಭೇಟಿ ಮಾಡಿದ್ದು, ಕಾರಿನ ಸಂಖ್ಯೆ ಎಲ್ಲವೂ 13 ಆಗಿದ್ದು ಇದನ್ನೇ ಅದೃಷ್ಟ ಸಂಖೆಯಾಗಿ ಆಯ್ಕೆ ಮಾಡಿರುವುದನ್ನು ಕಾಣಬಹುದು.

ಹಿಂದಿನ ಕಾಲದಲ್ಲಿ ಫೋಟೋ ಜರ್ನಲಿಸ್ಟ್‌ಗೂ ಸಹ ಡ್ರೆಸ್‌ಕೊಡ್‌, ಕೆಲವು ಶಿಸ್ತುಬದ್ಧ ನಿಯಮಗಳಿದ್ದವಂತೆ. ಬದಲಾದ ಕಾಲಘಟ್ಟಕ್ಕೆ ಫೋಟೋಗ್ರಫಿಯ ಒಂದು ಲಾಭದಾಯಕ ಹುದ್ದೆಯಾಗಿ ಪರಿವರ್ತಿಸುವ ವರ್ಗವನ್ನು ಕಂಡು ಬೆಸತ್ತು ಮತ್ತು ಪತಿ ಮನೇಕ್‌ಶಾ ಜಮ್‌ಸೇಟ್‌ಜಿ ಅವರು 1969ರಲ್ಲಿ ನಿಧನ ಹೊಂದಿದರು. ಪತಿ ಅಗಲಿಕೆಯ ನೋವು ಅವರನ್ನು ವೃತ್ತಿಜೀವನಕ್ಕೆ (1973) ವಿದಾಯ ಹೇಳುವಂತೆ ಮಾಡಿತು.

ರವಿ ಕಾಣದ್ದನ್ನು ಕವಿ ಕಂಡಂತೆ ನಮ್ಮಲ್ಲಿರುವ ಅದೆಷ್ಟೊ ನೆನಪುಗಳನ್ನು ಮೆಲುಕಿಸುವ ಫೋಟೋ ಎಂದೆದಿಗೂ ಜೀವಂತವೆನ್ನಬಹುದು. 2013ರಲ್ಲಿ ಇವರು ಮರಣಹೊಂದಿದರೂ ಇವರ ಚಿತ್ರಸಂಗ್ರಹಗಳು ಮುಂಬಯಿಯ ನ್ಯಾಷನಲ್‌ ಗ್ಯಾಲರಿಯಲ್ಲಿ ಇಂದಿಗೂ ಅವರ ಜೀವಂತಿಕೆಯನ್ನು ಪ್ರಸ್ತುತ ಪಡಿಸುತ್ತಲೇ ಇವೆ.

 ರಾಧಿಕಾ, ಕುಂದಾಪುರ 

Advertisement

Udayavani is now on Telegram. Click here to join our channel and stay updated with the latest news.

Next