Advertisement

‘ದಿ ರೈಸ್‌ ಆಫ್ ಫೈನಾನ್ಸ್‌’ಬುಕ್‌ ಅನಾವರಣ ; ಆರ್ಥಿಕ ಕುಸಿತಕ್ಕೆ ಉತ್ತರ ನೀಡುವ ಪ್ರಯತ್ನ 

09:53 AM Nov 12, 2019 | Team Udayavani |

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜಾಗತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ‘ದಿ ರೈಸ್‌ ಆಫ್ ಫೈನಾನ್ಸ್‌’ ಆರ್ಥಿಕ ಕ್ಷೇತ್ರದ ಕುಸಿತಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರಗಳು’ ಎಂಬ ಪುಸ್ತಕವೊಂದನ್ನು ಇಂದು ಬಿಡುಗಡೆಗೊಳಿಸಿದ್ದಾರೆ. ಪ್ರಸ್ತುತ ದೇಶದ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಈ ಪುಸ್ತಕದಲ್ಲಿ ಸೂಕ್ತ ಪರಿಹಾರಗಳನ್ನು ಸೂಚಿಸಲಾಗಿದೆ.

Advertisement

ಈ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಚಿವೆ ಸೀತಾರಾಮನ್‌ ಅವರು, ಆರ್ಥಿಕ ಕ್ಷೇತ್ರದಲ್ಲಾಗುತ್ತಿರುವ ಏರಿಳಿತವನ್ನು ಪ್ರಶ್ನೆ ಮಾಡುವವರಿಗೆ ಈ ಪುಸ್ತಕ ಉತ್ತರ ರೂಪದಲ್ಲಿ ಮೂಡಿಬಂದಿದೆ ಎಂದು ತಿಳಿಸಿದರು.

ಜಗತ್ತಿನ ಆರ್ಥಿಕತೆಯ ಮೇಲೆ ಯಾವೆಲ್ಲಾ  ಅಂಶಗಳು ಪರಿಣಾಮ ಬೀರುತ್ತಿವೆ ಹಾಗೂ ನಮ್ಮ ದೇಶದ ಆರ್ಥಿಕತೆ ಯಾಕೆ ಮಂದಗತಿಯಲ್ಲಿ ಸಾಗುತ್ತಿದೆ ಎಂಬೆಲ್ಲಾ ಹಲವಾರು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಪರಿಹಾರವನ್ನು ಸೂಚಿಸಲಾಗಿದೆ ಎಂದು ಸಚಿವೆ ನಿರ್ಮಲಾ ಅವರು ಪುಸ್ತಕದ ಕುರಿತಾಗಿ ಮಾತನಾಡುತ್ತಾ ವಿವರಿಸಿದರು.

ಈ ಪುಸ್ತಕ ಉಲ್ಲೇಖ ಮಾಡಿರುವ ಹಲವಾರು ಪರಿಹಾರ ಮಾರ್ಗಗಳು ವಿಶ್ವ ಮತ್ತು ದೇಶೀಯ ಆರ್ಥಿಕತೆಯು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮಾರ್ಗಸೂಚಿಯಾಗಿದೆ ಎಂದು ಅವರು ಪುಸ್ತಕದ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next