Advertisement

Dubai fire Case; ಇಫ್ತಾರ್‌ ಆಯೋಜಿಸಿದ್ದ ಕೇರಳ ದಂಪತಿ

08:31 PM Apr 17, 2023 | Team Udayavani |

ಅಬುದಾಬಿ: ದುಬೈ ಅಪಾರ್ಟ್‌ಮೆಂಟ್‌ ಬೆಂಕಿ ಅವಘಡದಲ್ಲಿ ಅಸುನೀಗಿದ ಕೇರಳದ ರಾಜೇಶ್‌ ಕಲಾಂಗಡನ್‌ ಮತ್ತು ಅವರ ಪತ್ನಿ ಜೇಶಿ ಕಂದಮಂಗಲತ್‌ ಇಫ್ತಾರ್‌ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

Advertisement

ಅಕ್ಕಪಕ್ಕದ ಮುಸ್ಲಿಂ ಸಮುದಾಯದವರನ್ನು ಊಟಕ್ಕೆ ಆಹ್ವಾನಿಸಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

ವಿಷು ಹಬ್ಬದ ಹಿನ್ನೆಲೆ ಅಕ್ಕ-ಪಕ್ಕದ ಮನೆಯವರನ್ನು ಊಟಕ್ಕೆ ಆಹ್ವಾನಿಸಿದ್ದರು. ರಂಜಾನ್‌ ಹಿನ್ನೆಲೆಯಲ್ಲಿ ಮುಸ್ಲಿಂ ಸ್ನೇಹಿತರಿಗಾಗಿ ಇಫ್ತಾರ್‌ ಆಯೋಜಿಸಿದ್ದರು. ಆದರೆ ದುರಾದೃಷ್ಟವಶಾತ್‌ ಫ್ಲ್ಯಾಟ್‌ ನಂ 405ರಲ್ಲಿ ಹೊತ್ತಿದ ಬೆಂಕಿ, ದಂಪತಿ ವಾಸವಿದ್ದ 406ನೇ ಫ್ಲ್ಯಾಟ್‌ಗೂ ಹಬ್ಬಿ, ಕಟ್ಟಡದ ಬಹುಭಾಗ ಬೆಂಕಿ ಹೊತ್ತಿದ್ದರಿಂದ ದಂಪತಿಯೂ ಸೇರಿ ಅಪಾರ್ಟ್‌ಮೆಂಟ್‌ 16 ಮಂದಿ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next