Advertisement

ಐದು ವರ್ಷಗಳಲ್ಲಿ ಭಾರತ ಸಂಪೂರ್ಣ ಸಾಕ್ಷರ ರಾಷ್ಟ್ರ!

07:45 AM Aug 06, 2017 | Team Udayavani |

ಜೈಪುರ: ಮುಂದಿನ 5 ವರ್ಷಗಳಲ್ಲಿ ಭಾರತ ಸಂಪೂರ್ಣ ಸಾಕ್ಷರ ರಾಷ್ಟ್ರವಾಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“ದೇಶದಿಂದ ಅನಕ್ಷರತೆಯನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಸರಕಾರ 6ರಿಂದ 12ನೇ ತರಗತಿವರೆಗಿನ ಮಕ್ಕಳ ನೆರವು ಪಡೆಯಲಿದೆ. ಅಗತ್ಯ ತರಬೇತಿ ಪಡೆಯಲಿರುವ ಈ ಮಕ್ಕಳು ಅವರ ಅನಕ್ಷರಸ್ಥ ತಂದೆ, ತಾಯಿ, ಅಜ್ಜ, ಅಜ್ಜಿಯರಿಗೆ ಅಕ್ಷರ ಕಲಿಸುವ ಮೂಲಕ ಸಾಕ್ಷರ ಭಾರತ ಕನಸು ನನಸಾಗಿಸಲು ನೆರವಾಗಲಿದ್ದಾರೆ’ ಎಂದಿದ್ದಾರೆ. ರಾಜಸ್ಥಾನ ಸರಕಾರ ಮತ್ತು ಜೆಮ್ಸ್‌ ಎಜುಕೇಶನ್‌ ಇಂಡಿಯಾ ಏರ್ಪಡಿಸಿದ್ದ “ಶಿಕ್ಷಣ ಹಬ್ಬ’ದಲ್ಲಿ ಮಾತನಾಡಿದ ಸಚಿವರು, “1947ರಲ್ಲಿ ದೇಶ ಸ್ವಾತಂತ್ರ್ಯ ಪಡೆದಾಗ ಕೇವಲ ಶೇ.18ರಷ್ಟಿದ್ದ ಸಾಕ್ಷರತೆ ಪ್ರಮಾಣ,ಈಗ ಶೇ.80 ತಲುಪಿದೆ. ಇದೀಗ ಮಕ್ಕಳಿಂದಲೇ ಹೆತ್ತವರಿಗೆ ಅಕ್ಷರ ಕಲಿಸುವ ಹೊಸ ಪರಿಕಲ್ಪನೆ ಜಾರಿಗೊಳಿಸಿ ಭಾರತವನ್ನು ಸಂಪೂರ್ಣ ಸಾಕ್ಷರ ರಾಷ್ಟ್ರವಾಗಿಸುವ ಗುರಿ ಹೊಂದಲಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next