Advertisement

ಭಾರತ ಶಕ್ತಿಶಾಲಿ ರಾಷ್ಟ್ರವಾಗುವುದು ಖಚಿತ: ವೆಂಕಟೇಶ್‌

05:51 PM Sep 04, 2017 | |

ಶಿವಮೊಗ್ಗ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತಿದರೆ ಇವರು ಮುಂದೆ ಸತ್ಪ್ರಜೆಗಳಾಗುತ್ತಾರೆ. ಇಂತಹ ಸತ್ಪ್ರಜೆಗಳಿಂದ ಭಾರತ ಮುಂದೊಂದು ದಿನ ಜಗತ್ತಿನ ಬಲಶಾಲಿ ರಾಷ್ಟ್ರವಾಗುವುದು ನಿಶ್ಚಿತ ಎಂದು ಉತ್ತಮ ಪ್ರಜಾ
ಪಾರ್ಟಿಯ ಶಿವಮೊಗ್ಗ ಘಟಕದ ಮುಖ್ಯಸ್ಥ ವೆಂಕಟೇಶ್‌ ಭರವಸೆ ವ್ಯಕ್ತಪಡಿಸಿದರು. 

Advertisement

ಉತ್ತಮ ಪ್ರಜಾ ಪಾರ್ಟಿ ಶಿವಮೊಗ್ಗ ವತಿಯಿಂದ ಇಲ್ಲಿನ ಲಕ್ಷ್ಮೀ ಗೆಲಾಕ್ಸಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆ (ಗಣಪತಿ ಚಿತ್ರ), ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಜನಸಾಮಾನ್ಯರಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಇಂತಹ ಸಾಮಾಜಿಕ ಬದಲಾವಣೆ ತರುವ ಉದ್ದೇಶದಿಂದ ಚಲನಚಿತ್ರ ನಟ ಉಪೇಂದ್ರ ಅವರು ಉತ್ತಮ
ಪ್ರಜಾ ಪಾರ್ಟಿಯನ್ನು ಸ್ಥಾಪಿಸಿದ್ದು, ಇದಕ್ಕೆ ಜನಸಾಮಾನ್ಯರು ಬೆಂಬಲ ನೀಡಬೆಕೆಂದು ಮನವಿ ಮಾಡಿದರು. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಸಂವಿಧಾನದ ಆಧಾರ ಸ್ಥಂಬಗಳಾಗಿವೆ. ಪತ್ರಿಕಾ ರಂಗವನ್ನು 4ನೇ ಅಂಗವಾಗಿ ಪರಿಗಣಿಸಲಾಗಿದೆ. ಒಂದು ಮನೆಗೆ ನಾಲ್ಕು ಗೋಡೆಗಳಿರುವಂತೆ ದೇಶವೆಂಬ ಮನೆಗೆ ಈ ನಾಲ್ಕು ಅಂಗಗಳು ಗೋಡೆಗಳಂತಿವೆ. ಈ ಗೋಡೆಗಳಿಗೆ ಜನಸಾಮಾನ್ಯರೇ ಭದ್ರ ಬುನಾದಿಯಾಗಿದ್ದಾರೆಂದರು.

ಭ್ರಷ್ಟಾಚಾರ, ಜಾತಿ ವೈಷಮ್ಯ, ಅಸಮಾನತೆ, ಬಡತನ, ಜಾತಿಯತೆ ಮತ್ತಿತರ ಸಮಸ್ಯೆಗಳು ಸಮಾಜವನ್ನು ಕಾಡುತ್ತಿವೆ. ಸಮಸ್ಯೆಗಳ ನಿವಾರಣೆಗೆ ಜನಸಾಮಾನ್ಯರಿಂದ ಮಾತ್ರ ಸಾಧ್ಯ. ಜನರಿಂದ ಜನರಿಗಾಗಿ ಜನರಿಗೋಸ್ಕರ ಉತ್ತಮ ಪ್ರಜಾ ಪಾರ್ಟಿಯನ್ನು ಸ್ಥಾಪಿಸಲಾಗಿದೆ. ಈ
ಮೂಲಕ ಸಾಮಾಜಿಕ ಸಮಸ್ಯೆಗಳ ನಿವಾರಣೆಗಳ ಜೊತೆಗೆ ಸಾಮಾಜಿಕ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು. 

 ಮಂಜು, ಹರೀಶ್‌, ಮಾದವನ್‌, ಮಹೇಶ್‌ ಚಿಕ್ಕಮಠ, ಸಂಧೀಪ್‌,ರಾಜೆಶ್‌, ಅಕ್ಷತಾ ವೆಂಕಟೇಶ್‌ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next