ಪಾರ್ಟಿಯ ಶಿವಮೊಗ್ಗ ಘಟಕದ ಮುಖ್ಯಸ್ಥ ವೆಂಕಟೇಶ್ ಭರವಸೆ ವ್ಯಕ್ತಪಡಿಸಿದರು.
Advertisement
ಉತ್ತಮ ಪ್ರಜಾ ಪಾರ್ಟಿ ಶಿವಮೊಗ್ಗ ವತಿಯಿಂದ ಇಲ್ಲಿನ ಲಕ್ಷ್ಮೀ ಗೆಲಾಕ್ಸಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆ (ಗಣಪತಿ ಚಿತ್ರ), ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಜನಸಾಮಾನ್ಯರಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಇಂತಹ ಸಾಮಾಜಿಕ ಬದಲಾವಣೆ ತರುವ ಉದ್ದೇಶದಿಂದ ಚಲನಚಿತ್ರ ನಟ ಉಪೇಂದ್ರ ಅವರು ಉತ್ತಮಪ್ರಜಾ ಪಾರ್ಟಿಯನ್ನು ಸ್ಥಾಪಿಸಿದ್ದು, ಇದಕ್ಕೆ ಜನಸಾಮಾನ್ಯರು ಬೆಂಬಲ ನೀಡಬೆಕೆಂದು ಮನವಿ ಮಾಡಿದರು. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಸಂವಿಧಾನದ ಆಧಾರ ಸ್ಥಂಬಗಳಾಗಿವೆ. ಪತ್ರಿಕಾ ರಂಗವನ್ನು 4ನೇ ಅಂಗವಾಗಿ ಪರಿಗಣಿಸಲಾಗಿದೆ. ಒಂದು ಮನೆಗೆ ನಾಲ್ಕು ಗೋಡೆಗಳಿರುವಂತೆ ದೇಶವೆಂಬ ಮನೆಗೆ ಈ ನಾಲ್ಕು ಅಂಗಗಳು ಗೋಡೆಗಳಂತಿವೆ. ಈ ಗೋಡೆಗಳಿಗೆ ಜನಸಾಮಾನ್ಯರೇ ಭದ್ರ ಬುನಾದಿಯಾಗಿದ್ದಾರೆಂದರು.
ಮೂಲಕ ಸಾಮಾಜಿಕ ಸಮಸ್ಯೆಗಳ ನಿವಾರಣೆಗಳ ಜೊತೆಗೆ ಸಾಮಾಜಿಕ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಮಂಜು, ಹರೀಶ್, ಮಾದವನ್, ಮಹೇಶ್ ಚಿಕ್ಕಮಠ, ಸಂಧೀಪ್,ರಾಜೆಶ್, ಅಕ್ಷತಾ ವೆಂಕಟೇಶ್ ಮತ್ತಿತರರು ಇದ್ದರು.