Advertisement

ಭಾರತ, ಪಾಕಿಸ್ಥಾನ, ಬಾಂಗ್ಲಾದೇಶಗಳು ವಿಲೀನವಾಗಬೇಕು: ಮಹಾರಾಷ್ಟ್ರ ಸಚಿವರ ಹೇಳಿಕೆ

10:32 AM Nov 23, 2020 | keerthan |

ಮುಂಬೈ: ಭಾರತ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶಗಳು ವಿಲೀನವಾಗಿ ಒಂದು ದೇಶವಾಗಲಿ ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಹೇಳಿಕೆ ನೀಡಿದ್ದಾರೆ.

Advertisement

ಒಂದು ವೇಳೆ ಬಿಜೆಪಿ ಮೂರು ದೇಶಗಳನ್ನು ವಿಲೀನ ಮಾಡಿ ಒಂದು ದೇಶವನ್ನಾಗಿ ಮಾಡಿದರೆ ಅದನ್ನು ನಮ್ಮ ಪಕ್ಷ ಸ್ವಾಗತಿಸುತ್ತದೆ ಎಂದು ಎನ್ ಸಿಪಿ ನಾಯಕ ಹೇಳಿಕೆ ನೀಡಿದ್ದಾರೆ.

ಕರಾಚಿ ಭಾರತದ ಭಾಗವಾಗಲಿದೆ ಎಂದು ದೇವೆಂದ್ರ ಫಡ್ನವೀಸ್ ಹೇಳಿದ್ದಾರೆ. ಕೇವಲ ಕರಾಚಿಯಲ್ಲ, ಬಾಂಗ್ಲಾದೇಶ ಮತ್ತು ಪಾಕಿಸ್ಥಾನ ಭಾರತದೊಂದಿಗೆ ವಿಲೀನವಾಗಲಿ. ಬರ್ಲಿನ್ ಗೋಡೆಯನ್ನೇ ಧ್ವಂಸ ಮಾಡಲಾಗುತ್ತದಂತೆ, ಈ ಮೂರು ದೇಶಗಳು ವಿಲೀನವಾಗಬಹುದು. ಒಂದು ವೇಳೆ ಬಿಜೆಪಿ ಮೂರು ದೇಶಗಳನ್ನು ವಿಲೀನ ಮಾಡಿ ಒಂದು ದೇಶವನ್ನಾಗಿ ಮಾಡಿದರೆ ಅದನ್ನು ಎನ್ ಸಿಪಿ  ಸ್ವಾಗತಿಸುತ್ತದೆ ಎಂದು ನವಾಬ್ ಮಲಿಕ್ ಹೇಳಿದ್ದಾರೆ

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದ ಭಾಗವಾಗಿರುವ ಶಿವಸೇನೆ ಮತ್ತು ಕಾಂಗ್ರೆಸ್ ಜೊತೆಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಎನ್‌ಸಿಪಿ ಸ್ಪರ್ಧಿಸ;ಒದೆ ಎಂದು ಮಲಿಕ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next