Advertisement

2047ರಲ್ಲಿ ದೇಶ ಮತ್ತೆ ವಿಭಜನೆಯಾಗುತ್ತದೆ;ಕೇಂದ್ರ ಸಚಿವರ ಟ್ವೀಟ್‌

04:20 PM Sep 16, 2018 | Team Udayavani |

  ಹೊಸದಿಲ್ಲಿ: 2047 ರಲ್ಲಿ ಭಾರತ ದೇಶ ಮತ್ತೆ ವಿಭಜನೆ ಆಗುತ್ತದೆ ಎಂದು ಟ್ವೀಟ್‌ ಮಾಡುವ ಮೂಲಕ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

Advertisement

‘1947 ರಲ್ಲಿ ಧರ್ಮದ ಆಧಾರದ ಮೇಲೆ ದೇಶ ಹೇಗೆ ವಿಭಜನೆ ಆಯಿತೋ ಅಂತಹದ್ದೆ ಪರಿಸ್ಥಿತಿ 2047ರಲ್ಲಿ ಬರುತ್ತದೆ. 72 ವರ್ಷಗಳಲ್ಲಿ ಜನಸಂಖ್ಯೆ 33 ಕೋಟಿಯಿಂದ 135.7 ಕೋಟಿಗೆ ಏರಿಕೆಯಾಗಿದೆ. ವಿಭಜನಕರಾರಿ ಶಕ್ತಿಗಳ ಸಂಖ್ಯೆ ವಿಸ್ಫೋಟವಾಗುತ್ತಿದೆ. ಈಗ  35 ಎ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಏಕ ಭಾರತವನ್ನು ಕಾಣುವುದು ಅಸಂಭವ’ ಎಂದು ಬರೆದಿದ್ದಾರೆ.

ಜನಸಂಖ್ಯಾ ಸ್ಫೋಟನ ಕುರಿತು ಈ ಹಿಂದೆಯೂ ಗಿರಿರಾಜ್‌ ಸಿಂಗ್‌ ಅವರು ಧ್ವನಿ ಎತ್ತಿದ್ದರು. ಈ ಕುರಿತು ಸಂಸತ್‌ನಲ್ಲಿ ಮಾತ್ರವಲ್ಲ ಬೀದಿ ಬೀದಿಗಳಲ್ಲಿ ಚರ್ಚೆ ನಡೆಯಬೇಕು ಎಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next