Advertisement
ರಾಹುಲ್ ಸೇರ್ಪಡೆ
Related Articles
Advertisement
ರಹಾನೆಗೆ ಹೆಚ್ಚಿದ ನಾಯಕತ್ವದ ಜವಾಬ್ದಾರಿ
ವಿರಾಟ್ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡ ಅಜಿಂಕ್ಯ ರಹಾನೆ ಮೊದಲ ಪಂದ್ಯದ ಸೋಲಿನಿಂದ ಹೊರಬಂದು ಟೀಕೆಗಳ ಬಗ್ಗೆ ತೆಲೆಕೆಡಿಸಿಕೊಳ್ಳದೆ ಮುಂದಿನ ಪಂದ್ಯಕ್ಕೆ ಮಾನಸಿಕವಾಗಿ ಸದೃಡತೆಯಿಂದ ಸಜ್ಜಾಗಬೇಕಿದೆ. ತಂಡದ ಆಟಗಾರರಲ್ಲಿ ಆತ್ಮವಿಶ್ವಾಸದ ನುಡಿಗಳನ್ನಾಡಿ ತಂಡವನ್ನು ಮುನ್ನಡೆಸಬೇಕಿದೆ. ಜತೆಗೆ ಬ್ಯಾಟಿಂಗ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಬೇಕಿದೆ.
ಇದನ್ನೂ ಓದಿ:ಗೆಲ್ಲಬೇಕಾದರೆ ಈ ತಕ್ಷಣ ರಾಹುಲ್ ದ್ರಾವಿಡ್ರನ್ನು ಆಸ್ಟ್ರೇಲಿಯಕ್ಕೆ ಕಳಿಸಿಕೊಡಿ!
ಜಡೇಜ ಮರುಪ್ರವೇಶ?
ತಂಡದಲ್ಲಿ ಕಾಡುತ್ತಿರುವ ಆಲ್ರೌಂಡರ್ ಸಮಸ್ಯೆಗೆ ರವೀಂದ್ರ ಜಡೇಜ ಆಯ್ಕೆ ಉತ್ತಮ ಪರಿಹಾರವಾಗಿದೆ. ಗಾಯದ ಸಮಸ್ಯೆಯಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಜಡೇಜ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಮುಂದಿನ ಪಂದ್ಯಕ್ಕೆ ಹನುಮ ವಿಹಾರಿ ಬದಲು ಜಡೇಜ ಅವರು ಅವಕಾಶ ಪಡೆಯುವುದು ಬಹುತೇಕ ಖಾತ್ರಿ. ಜಡೇಜ ಲಭ್ಯತೆಯಿಂದ ಸ್ಪಿನ್ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗ ಮತ್ತಷ್ಟು ಸದೃಢಗೊಳ್ಳಲಿದೆ.
ಶಮಿ ಸ್ಥಾನಕ್ಕೆ ಸಿರಾಜ್ ಸೂಕ್ತ
ಕಳೆದ ಪಂದ್ಯದಲ್ಲಿ ಗಯಾಳಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದ ಮೊಹಮ್ಮದ್ ಶಮಿ ಸ್ಥಾನಕ್ಕೆ ಸಿರಾಜ್ ಅವರನ್ನು ಆಡಿಸಿದರೆ ಉತ್ತಮ. ಅಭ್ಯಾಸ ಪಂದ್ಯದಲ್ಲಿ ಸಿರಾಜ್ ಉತ್ತಮ ಪ್ರದರ್ಶನ ತೋರಿದ್ದು ತಂಡದ ಆತ್ಮವಿಶ್ವಾಸ ಮೂಡಿಸಿದ್ದಾರೆ. ಉಳಿದಂತೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಾಹಾ ಬದಲಿಗೆ ಪಂತ್ಗೆ ಅವಕಾಶ ನೀಡಿದರೂ ತಪ್ಪಾಗಲಾರದು. ಪಂತ್ ಕಳೆದ ಆಸೀಸ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ ಜತೆಗೆ ಅಭ್ಯಾಸ ಪಂದ್ಯದಲ್ಲಿಯೂ ಶತಕ ಸಿಡಿಸಿ ಮಿಂಚಿದ್ದರು. ಸಾಹಾ ಕೀಪಿಂಗ್ ಹೊರತುಪಡಿಸಿ ಬ್ಯಾಟಿಂಗ್ನಲ್ಲಿ ಘೋರ ವೈಫಲ್ಯ ಅನುಭವಿಸುತ್ತಿದ್ದು ತಂಡಕ್ಕೆ ಹಿನ್ನಡೆಯಾಗಿದೆ ಆದ್ದರಿಂದ ಪಂತ್ಗೆ ಆಡುವ ಅವಕಾಶ ನೀಡಬೇಕೆನ್ನುವುದು ಹಲವರ ಅಭಿಪ್ರಾಯವಾಗಿದೆ.
ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ
ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೆ ಒಂದು ಪಂದ್ಯವನ್ನು ಸೋತಿದೆ. ಮುಂದಿನ ಪಂದ್ಯಕ್ಕೆ ವಿರಾಟ್, ಅನುಪಸ್ಥಿತಿ. ಕ್ವಾರಂಟೈನ್ ವಾಸದಲ್ಲಿರುವ ರೋಹಿತ್ ಶರ್ಮ ಕೂಡ ದ್ವಿತೀಯ ಟೆಸ್ಟ್ ಆಡುವುದ ಅನುಮಾನ ಆದ್ದರಿಂದ ಭಾರತಕ್ಕೆ ಅನುಭವಿ ಆಟಗಾರರ ಕೊರತೆ ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಸೋಲಿಗೆ ಅನೇಕ ಕ್ರಿಕೆಟಿಗರಿಂದ ದೊಡ್ಡಮಟ್ಟದಲ್ಲಿ ಟೀಕೆಯೂ ವ್ಯಕ್ತವಾಗುತ್ತಿದೆ.
ಇದೆಲ್ಲವನ್ನು ಮೆಟ್ಟಿನಿಂತು ಭಾರತ ಹೊಸ ಹುರುಪಿನೊಂದಿಗೆ ಮುಂದಿನ ಪಂದ್ಯದಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರುವ ಮೂಲಕ ಎದುರಾಳಿಗಳ ವಿರುದ್ಧ ತಿರುಗಿ ಬೀಳಬೇಕಿದೆ. ಒಂದೊಮ್ಮೆ ಭಾರತ ಈ ಪಂದ್ಯವನ್ನು ಸೋತರೆ ಸರಣಿ ಗೆಲ್ಲುವ ಹೋರಾಟವೊಂದನ್ನು ಅರ್ಧ ದಾರಿಲ್ಲಿಯೇ ಕೊನೆಗೊಳಿಸಲಿದೆ ಎನ್ನಲಡ್ಡಿಯಿಲ್ಲ. ಗೆದ್ದರೆ ಹೋರಾಟ ಜಾರಿಯಲ್ಲಿರಲಿದೆ