Advertisement

ಭಾರತ ಹಿಂದೂ ದೇಶ; ಮುಸ್ಲಿಮರಿಂದಾಗಿ ಸಮಸ್ಯೆ: ಬಿಜೆಪಿ ನಾಯಕ

11:42 AM Jan 02, 2018 | udayavani editorial |

ಲಕ್ನೋ : ”ಭಾರತ ಹಿಂದೂ ದೇಶ, ಹಿಂದೂ ಧರ್ಮವನ್ನು ಅನುಸರಿಸುವವರಿಗೆ ಮಾತ್ರವೇ ಇರುವ ದೇಶ” ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕರೋರ್ವರು ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

Advertisement

”ಭಾರತದ ಹೆಸರು ಹಿಂದುಸ್ಥಾನ; ಹಾಗಾಗಿ ಇದು ಹಿಂದುಗಳ ದೇಶ ಎನ್ನುವುದು ಸ್ಪಷ್ಟವಿದೆ” ಎಂದು ಬಿಜೆಪಿ ಶಾಸಕ ವಿಕ್ರಮ್‌ ಸಾಯಿನಿ ಹೇಳಿದರು.

“ಇವತು ಪ್ರತಿಯೊಬ್ಬರು ತಮ್ಮ ಜಾತಿ ಏನೇ ಇರಲಿ – ಸರಕಾರದಿಂದ ಸಿಗುವ ಸವಲತ್ತುಗಳನ್ನು ಲಾಭಗಳನ್ನು ಪಡೆಯುತ್ತಿದ್ದಾರೆ’ ಎಂದು ಹೇಳಿದ ವಿಕ್ರಮ್‌ ಸಾಯಿನಿ, “ಈ ಹಿಂದೆ ಉದ್ದನೆಯ ಗಡ್ಡ ಬಿಟ್ಟವರಿಗೆ ಮಾತ್ರವೇ ದೊಡ್ಡ ಮೊತ್ತದ ಚೆಕ್ಕುಗಳು ಸರಕಾರದಿಂದ ಸಿಗುತ್ತಿದ್ದವು’ ಎಂದು ಹಿಂದಿನ ಸರಕಾರದ ಮೇಲೆ ದಾಳಿ ನಡೆಸುತ್ತಾ ಹೇಳಿದರು.

”ನಾನೊಬ್ಬ ಕಟ್ಟರ್‌ ಹಿಂದೂವಾದಿ” ಎಂದು ಬಿಜೆಪಿ ನಾಯಕ ವಿಕ್ರಂ ಸಾಯಿನಿ ಅವರು ಸೋಮವಾರ ಉತ್ತರ ಪ್ರದೇಶದ ಮುಜಫ‌ರನಗರದಲ್ಲಿ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. 

“ಹಿಂದೆ ಕೆಲವು ಅದಕ್ಷ ಜನರು ಮುಸ್ಲಿಮರು ದೇಶ ಬಿಟ್ಟು ಹೋಗದಂತೆ ತಡೆದರು; ಅದರ ಪರಿಣಾಮವಾಗಿ ನಾವಿಂದು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ; ಒಂದೊಮ್ಮೆ ಅವರು ಅಂದೇ ದೇಶ ಬಿಟ್ಟು ತೊಲಗಿದ್ದರೆ ಭರತ ಖಂಡದ ಎಲ್ಲ ಭೂಮಿ ನಮ್ಮದೇ ಆಗಿರುತ್ತಿತ್ತು’ ಎಂದು ಸಾಯಿನಿ ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next