Advertisement

ಚೀನದ ವಿರುದ್ಧ ಈಗ ಜಲ ಸಮರ

12:26 AM Dec 02, 2020 | mahesh |

ಹೊಸದಿಲ್ಲಿ: ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಮುಂದಾಗಿರುವ ಚೀನಕ್ಕೆ ತಕ್ಕ ಪಾಠ ಕಲಿಸಲು ಭಾರತ ಸಜ್ಜಾಗಿದೆ. ಅರುಣಾಚಲ ಪ್ರದೇಶದಲ್ಲಿ ಇದೇ ನದಿಗೆ 10 ಗಿಗಾವ್ಯಾಟ್‌ ಜಲವಿದ್ಯುತ್‌ ಉತ್ಪಾದನೆ ಸಾಮರ್ಥ್ಯದ ಅಣೆಕಟ್ಟು ನಿರ್ಮಿಲು ಭಾರತವೂ ತಯಾರಿ ನಡೆಸುತ್ತಿದೆ.

Advertisement

ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ಚೀನ ಸಿದ್ಧತೆ ನಡೆಸಿದೆ. ಈ ಅಣೆಕಟ್ಟು ನಿರ್ಮಾಣವಾದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ಆಕ್ಷೇಪಗಳನ್ನು ಬದಿಗೊತ್ತಿ ಅಣೆಕಟ್ಟು ನಿರ್ಮಿಸಲು ಚೀನ ಮುಂದಾಗಿದೆ. ಭಾರತ ಅದಕ್ಕೆ ತಕ್ಕ ಪಾಠ ಕಲಿಸಲು ತಯಾರಿ ನಡೆಸಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ಆಯುಕ್ತ ಟಿ.ಎಸ್‌. ಮಿಶ್ರಾ ಹೇಳಿದ್ದಾರೆ.

ಅಣೆಕಟ್ಟು ನಿರ್ಮಾಣಕ್ಕೆ ಚೀನ ಮುಂದಾಗಿರುವುದರಿಂದ ನಾವೂ ದೊಡ್ಡದಾದ ಅಣೆಕಟ್ಟು ನಿರ್ಮಾಣ ಮಾಡಲೇಬೇಕು. ಇಲ್ಲದಿದ್ದರೆ ಭಾರತಕ್ಕೆ ಅಪಾಯ ಹೆಚ್ಚು ಎಂದು ಮಿಶ್ರಾ ತಿಳಿಸಿದ್ದಾರೆ.

ಬ್ರಹ್ಮಪುತ್ರಾ ನದಿಗೆ ಚೀನದಲ್ಲಿ ಯರ್ಲುಂಗ್‌ ಸ್ಯಾಂಗ್ದೋ ಎನ್ನಲಾಗುತ್ತದೆ. ಇದು ಟಿಬೆಟ್‌ನಲ್ಲಿ ಹುಟ್ಟಿ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೂಲಕ ಹರಿದು, ಬಾಂಗ್ಲಾ ಸೇರುತ್ತದೆ. ಚೀನ ಈ ಅಣೆಕಟ್ಟು ನಿರ್ಮಾಣ ಮಾಡಿದರೆ ಭಾರತಕ್ಕೆ ದಿಢೀರ್‌ ಪ್ರವಾಹದಂಥ ಅಪಾಯಗಳು ಉಂಟಾಗುತ್ತವೆ ಎಂಬುದು ಮಿಶ್ರಾ ಅವರ ಹೇಳಿಕೆ.

ಕೇಂದ್ರಕ್ಕೆ ಪ್ರಸ್ತಾವ
ಡ್ಯಾಂ ನಿರ್ಮಾಣ ಕುರಿತ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರ ಅತೀ ಆದ್ಯತೆ ಮೇರೆಗೆ ಪ್ರಸ್ತಾವವನ್ನು ಪರಿಶೀಲಿಸಿದೆ ಎಂದು ಟಿ.ಎಸ್‌. ಮಿಶ್ರಾ ಹೇಳಿದ್ದಾರೆ. ಡ್ಯಾಂ ನಿರ್ಮಿಸುವ ಚೀನ ಮತ್ತು ಭಾರತದ ಪ್ರಸ್ತಾವನೆಯಿಂದಾಗಿ ಹೊಸ ವಿವಾದ ಆರಂಭವಾಗಬಹುದು ಎಂಬುದು ತಜ್ಞರ ಆತಂಕ. ಸದ್ಯ ಎರಡೂ ದೇಶಗಳ ವೈಮನಸ್ಸಿಗೆ ಲಡಾಖ್‌ ಕೇಂದ್ರ ಬಿಂದುವಾಗಿದೆ. ಮುಂದೆ ಈ ಡ್ಯಾಂ ನಿರ್ಮಾಣ ವಿಚಾರವೇ ಕೇಂದ್ರಬಿಂದು ಆಗ
ಬಹುದು ಎಂದಿದ್ದಾರೆ.

Advertisement

ಚೀನಕ್ಕೆ ಚಳಿ ಕಾಟ
ಲಡಾಖ್‌ ಘರ್ಷಣೆಯ ಅನಂತರ ಭಾರತ ಮತ್ತು ಚೀನದ ಸೇನೆಗಳು ಅಲ್ಲೇ ನೆಲೆಯೂರಿವೆ. ಆದರೆ ಸದ್ಯ ಚಳಿಗಾಲ ಚೀನದ ಸೈನಿಕರನ್ನು ಹೆಚ್ಚು ಬಾಧಿಸುತ್ತಿದೆ. ಹೀಗಾಗಿ ಅಲ್ಲಿರುವ ಚೀನದ ಸೈನಿಕರನ್ನು ಪ್ರತಿದಿನವೂ ಬದಲಾವಣೆ ಮಾಡಲಾಗುತ್ತಿದೆ ಎಂದು ಭಾರತ ಸೇನೆಯ ಮೂಲಗಳು ತಿಳಿಸಿವೆ. ಆದರೆ ಭಾರತೀಯ ಸೈನಿಕರು ವಿಶೇಷ ತರಬೇತಿ ಹೊಂದಿದ್ದಾರೆ, ಅಲ್ಲದೆ ಬೆಚ್ಚಗಿನ ಟೆಂಟ್‌ಗಳೂ ಇವೆ. ಹೀಗಾಗಿ ಭಾರತದ ಯೋಧರು ದೀರ್ಘಾವಧಿ ವರೆಗೆ ಮುಂಚೂಣಿ ನೆಲೆಯಲ್ಲೇ ಗಸ್ತು ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next