Advertisement

INDIA ಬಣಕ್ಕೆ ಮಹಾತ್ಮ ಗಾಂಧಿಯವರ ಸನಾತನ ಧರ್ಮ ಅಳಿಸುವ ಬಯಕೆ: ಸಿಂಧಿಯಾ

05:32 PM Sep 17, 2023 | Team Udayavani |

ಗ್ವಾಲಿಯರ್‌: ಮಹಾತ್ಮ ಗಾಂಧಿಯವರ ಸನಾತನ ಧರ್ಮವನ್ನು ಅಳಿಸಲು ಇಂಡಿಯಾ ಮೈತ್ರಿಕೂಟ ಬಯಸುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭಾನುವಾರ ಆರೋಪಿಸಿದ್ದಾರೆ.

Advertisement

ವ್ಯಾಪಕವಾದ ಸಾರ್ವಜನಿಕ ಆಕ್ರೋಶವನ್ನು ಗ್ರಹಿಸಿ ಅದು ಭೋಪಾಲ್‌ನಲ್ಲಿ ಉದ್ದೇಶಿತ ರ‍್ಯಾಲಿಯನ್ನು ರದ್ದುಗೊಳಿಸಿದೆ.ದೇಶದ 140 ಕೋಟಿ ಜನರು ಈ ಮೈತ್ರಿಯನ್ನು ಕೊನೆಗೊಳಿಸಲಿದ್ದಾರೆ ಎಂದರು.

”ಅಕ್ಟೋಬರ್‌ನಲ್ಲಿ ಭೋಪಾಲ್‌ನಲ್ಲಿ ನಡೆಸಲು ಉದ್ದೇಶಿಸಿರುವ ಇಂಡಿಯಾ ಮೈತ್ರಿಕೂಟದ ಮೊದಲ ರ‍್ಯಾಲಿಯನ್ನು ರದ್ದುಗೊಳಿಸಿರುವ ಬಗ್ಗೆ ಕೇಳಿದಾಗ ಸಿಂಧಿಯಾ ಸುದ್ದಿಗಾರರೊಂದಿಗೆ ಮಾತನಾಡಿ, “ಪ್ರತಿಪಕ್ಷಗಳ ಮೈತ್ರಿಯು ಸನಾತನ ಧರ್ಮವನ್ನು ನಾಶಮಾಡಲು, ದೇಶಾದ್ಯಂತ ಭ್ರಷ್ಟಾಚಾರವನ್ನು ಹರಡಲು, ರಾಜವಂಶದ ರಾಜಕೀಯ ಮತ್ತು ತುಷ್ಟೀಕರಣವನ್ನು ಮಾಡಲು ಬಯಸುತ್ತದೆ. ಆದರೆ ಅವರ ವಿರುದ್ಧ ವ್ಯಾಪಕವಾದ ಸಾರ್ವಜನಿಕ ಕೋಪವನ್ನು ಅರಿತು, ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ” ಎಂದರು.

ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು  ಸಚಿವ ಸಿಂಧಿಯಾ ಗ್ವಾಲಿಯರ್‌ಗೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next