ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಸವಿನೆನಪಿನಲ್ಲಿ ಕಾಂಗ್ರೆಸ್ ಬೃಹತ್ ನಡಿಗೆ ಅಭಿಯಾನ ಶುರು ಮಾಡಿದೆ. ಅದರ ಭಾಗವಾಗಿ ಸಾಮಾಜಿಕ ಜಾಲತಾಣ ‘ಕೂ’ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ರ್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಕಾಂಗ್ರೆಸ್: ಭಾರತವನ್ನು ಮೂರು ಪದಗಳಲ್ಲಿ ವಿವರಿಸಿ?
ಡಿಕೆಶಿ: ನನ್ನ ಪ್ರೀತಿಯ ರಾಷ್ಟ್ರ
ಕಾಂಗ್ರೆಸ್: ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೇನು ಮೂರು ಪದಗಳಲ್ಲಿ ಹೇಳಿ?
Related Articles
ಡಿಕೆಶಿ: ಸಂವಿಧಾನ, ಹಕ್ಕುಗಳು, ಅಹಿಂಸೆ
ಕಾಂಗ್ರೆಸ್: ಸ್ವಾತಂತ್ರ್ಯ ಭಾರತವನ್ನು ರೂಪಿಸಲು ಕಾರಣವಾಗಿರುವ ಪ್ರಮುಖ 5 ಘಟನೆಗಳು ಯಾವುವು?
ಡಿಕೆಶಿ: – ಮಹಾತ್ಮ ಗಾಂಧಿಯವರ ಹತ್ಯೆ
– ಜವಾಹರಲಾಲ್ ನೆಹರು ಅವರಿಂದ ಭಾಷಾವಾರು ರಾಜ್ಯಗಳ ರಚನೆ
– ಇಂದಿರಾ ಗಾಂಧಿ ಅವರು ಹಸಿರು ಕ್ರಾಂತಿ
– ಬ್ಯಾಂಕುಗಳ ರಾಷ್ಟ್ರೀಕರಣ
– ರಾಜೀವ್ ಗಾಂಧಿಯವರ ಗಣಕಯಂತ್ರ ಕ್ರಾಂತಿ
-ಸೋನಿಯಾ ಗಾಂಧಿ ಅವರ ನರೇಗಾ ನೀತಿ
ಕಾಂಗ್ರೆಸ್: ನಿಮ್ಮ ಪ್ರಕಾರ ರಾಷ್ಟ್ರಧ್ವಜದ ಮೂರು ಬಣ್ಣಗಳು ಏನನ್ನು ಧ್ವನಿಸುತ್ತವೆ?
ಡಿಕೆಶಿ: ನಾವು ಒಗ್ಗಟ್ಟಿನಿಂದ ನಿಲ್ಲಬೇಕು
ಕಾಂಗ್ರೆಸ್: ಭಾರತದ 100ನೇ ವರ್ಷದ ಸ್ವಾತಂತ್ರ್ಯೊತ್ಸವದ ವೇಳೆ ಯಾವ ಮೂರು ವಿಷಯಗಳು ಆಗಿರಲೆಂದು ನೀವು ಆಶಿಸುತ್ತೀರಿ?
ಡಿಕೆಶಿ: ನಿರುದ್ಯೋಗ ನಿವಾರಣೆ, ಕೋಮುಗಲಬೆ ನಿವಾರಣೆ, ಮಹಿಳೆಯರಿಗೆ ಸಮಾನತೆ ದೊರೆತಿರಬೇಕು.