Advertisement

ಕಾಂಗ್ರೆಸ್ ಬೃಹತ್ ನಡಿಗೆ ಅಭಿಯಾನ: ರಾಪಿಡ್ ಫೈರ್ ಪ್ರಶ್ನೆಗಳಿಗೆ ಡಿಕೆಶಿ ಉತ್ತರ

11:44 AM Aug 14, 2022 | Team Udayavani |

ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಸವಿನೆನಪಿನಲ್ಲಿ ಕಾಂಗ್ರೆಸ್ ಬೃಹತ್ ನಡಿಗೆ ಅಭಿಯಾನ ಶುರು ಮಾಡಿದೆ. ಅದರ ಭಾಗವಾಗಿ ಸಾಮಾಜಿಕ ಜಾಲತಾಣ ‘ಕೂ’ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ರ್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Advertisement

ಕಾಂಗ್ರೆಸ್: ಭಾರತವನ್ನು ಮೂರು ಪದಗಳಲ್ಲಿ ವಿವರಿಸಿ?

ಡಿಕೆಶಿ: ನನ್ನ ಪ್ರೀತಿಯ ರಾಷ್ಟ್ರ

ಕಾಂಗ್ರೆಸ್: ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೇನು ಮೂರು ಪದಗಳಲ್ಲಿ ಹೇಳಿ?

ಡಿಕೆಶಿ: ಸಂವಿಧಾನ, ಹಕ್ಕುಗಳು, ಅಹಿಂಸೆ

Advertisement

ಕಾಂಗ್ರೆಸ್: ಸ್ವಾತಂತ್ರ್ಯ ಭಾರತವನ್ನು ರೂಪಿಸಲು ಕಾರಣವಾಗಿರುವ ಪ್ರಮುಖ 5 ಘಟನೆಗಳು ಯಾವುವು?

ಡಿಕೆಶಿ: – ಮಹಾತ್ಮ ಗಾಂಧಿಯವರ ಹತ್ಯೆ

– ಜವಾಹರಲಾಲ್ ನೆಹರು ಅವರಿಂದ ಭಾಷಾವಾರು ರಾಜ್ಯಗಳ ರಚನೆ

– ಇಂದಿರಾ ಗಾಂಧಿ ಅವರು ಹಸಿರು ಕ್ರಾಂತಿ

– ಬ್ಯಾಂಕುಗಳ ರಾಷ್ಟ್ರೀಕರಣ

– ರಾಜೀವ್ ಗಾಂಧಿಯವರ ಗಣಕಯಂತ್ರ ಕ್ರಾಂತಿ

-ಸೋನಿಯಾ ಗಾಂಧಿ ಅವರ ನರೇಗಾ ನೀತಿ

ಕಾಂಗ್ರೆಸ್: ನಿಮ್ಮ ಪ್ರಕಾರ ರಾಷ್ಟ್ರಧ್ವಜದ ಮೂರು ಬಣ್ಣಗಳು ಏನನ್ನು ಧ್ವನಿಸುತ್ತವೆ?

ಡಿಕೆಶಿ: ನಾವು ಒಗ್ಗಟ್ಟಿನಿಂದ ನಿಲ್ಲಬೇಕು

ಕಾಂಗ್ರೆಸ್: ಭಾರತದ 100ನೇ ವರ್ಷದ ಸ್ವಾತಂತ್ರ್ಯೊತ್ಸವದ ವೇಳೆ ಯಾವ ಮೂರು ವಿಷಯಗಳು ಆಗಿರಲೆಂದು ನೀವು ಆಶಿಸುತ್ತೀರಿ?

ಡಿಕೆಶಿ: ನಿರುದ್ಯೋಗ ನಿವಾರಣೆ, ಕೋಮುಗಲಬೆ ನಿವಾರಣೆ, ಮಹಿಳೆಯರಿಗೆ ಸಮಾನತೆ ದೊರೆತಿರಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next