Advertisement

ಮತ್ತೆ ಹಳಿ ತಪ್ಪಿದ ಭಾರತದ ಬ್ಯಾಟಿಂಗ್

04:06 AM Feb 03, 2019 | Team Udayavani |

ವೆಲ್ಲಿಂಗ್ಟನ್ : ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವಾಡಲಿಳಿದ ಭಾರತ ತಂಡದ ಬ್ಯಾಟಿಂಗ್ ಮತ್ತೆ ಹಳಿ ತಪ್ಪಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡ ಆರಂಭಿಕ ಕುಸಿತದ ನಂತರ ಸುಧಾರಿಸಿದ ಭಾರತ 40  ಓವರ್ ನಷ್ಟಕ್ಕೆ ಐದು ವಿಕೆಟ್ ನಷ್ಟಕ್ಕೆ 168 ರನ್  ಗಳಿಸಿದೆ. ಅಂಬಟಿ ರಾಯುಡು 75  ರನ್ ಗಳಿಸಿ ಆಟವಾಡುತ್ತಿದ್ದಾರೆ.    

Advertisement

ಕಳೆದ ಪಂದ್ಯದಂತೆ ಭಾರತದ ಆರಂಭಿಕರು ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲರಾದರು. ನಾಯಕ ರೋಹಿತ್ ಶರ್ಮಾ ಕೇವಲ ಎರಡು ರನ್ ಗಳಿಸಿ ಮ್ಯಾಟ್ ಹೆನ್ರಿ ಗೆ ವಿಕೆಟ್ ಒಪ್ಪಿಸಿದರೆ, ಶಿಖರ್ ಧವನ್ ಗಳಿಕೆ ಆರು ರನ್. ಯುವ ಆಟಗಾರ ಶುಭ್ಮನ್ ಗಿಲ್ ಮತ್ತೊಂದು ಚಾನ್ಸ್ ಪಡೆದರೂ ಗಳಿಸಿದ್ದು ಮಾತ್ರ ಏಳು ರನ್. 


ಕಳೆದೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಕೇವಲ ಒಂದು ರನ್ ಮಾಡಿ ಬೌಲ್ಟ್ ಗೆ ಬೌಲ್ಡ್ ಆದರು. ಸದ್ಯ ಅಂಬಾಟಿ ರಾಯುಡುಗೆ ಉತ್ತಮ ಸಾಥ್ ನೀಡಿ  ವಿಜಯ್ ಶಂಕರ್ 45 ರನ್ ಮಾಡಿ ಔಟಾದರು.


ಮ್ಯಾಟ್ ಹೆನ್ರಿ ಮತ್ತು ಟ್ರೆಂಟ್ ಬೌಲ್ಟ್ ತಲಾ ಎರಡು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಭಾರತ ಮೂರು ಬದಲಾವಣೆ ಮಾಡಿಕೊಂಡಿತು. ದಿನೇಶ್ ಕಾರ್ತಿಕ್, ಖಲೀಲ್ ಅಹಮದ್, ಕುಲದೀಪ್ ಯಾದವ್ ಬದಲಿಗೆ ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಶಮಿ, ವಿಜಯ್ ಶಂಕರ್ ಸ್ಥಾನ ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next