Advertisement

ಪ್ರವೇಶಾತಿ ಏರಿಕೆ; ಮೂಲಸೌಕರ್ಯ ಕೊರತೆ

08:10 PM Sep 19, 2021 | Team Udayavani |

ಮೂಡುಬಿದಿರೆ: ಕೆಸರ್‌ಗದ್ದೆಯ ಸರಕಾರಿ ಮಾದರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಬೆಳುವಾಯಿ ಮೈನ್‌ (ಶಾಸಕರ ಶಾಲೆ) ಇಲ್ಲಿ ಕಳೆದ ಬಾರಿ 305 ಮಂದಿ ವಿದ್ಯಾರ್ಥಿಗಳಿದ್ದರೆ ಈ ಬಾರಿ ಇದುವರೆಗೆ 385 ಮಕ್ಕಳು ಪ್ರವೇಶ ಪಡೆದಿದ್ದಾರೆ.

Advertisement

2013ರಲ್ಲಿ ಶಾಲಾ ಶತಮಾನೋತ್ಸವ  ನಡೆದ ಬಳಿಕ ಮಕ್ಕಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತ ಬಂದಿದೆ. ಇದಕ್ಕೆ ಇಲಾಖೆಯೊಂದಿಗೆ ಕೈ ಜೋಡಿಸಿದ ದಾನಿಗಳೂ ಕಾರಣ. ಈಗ ಏರಿಕೆಯಾಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಕ್ಕ ಮೂಲ ಸೌಕರ್ಯಗಳಿಗೂ ಇಲಾಖೆ ಮನಸ್ಸು ಮಾಡುತ್ತಿದೆ.

1ರಿಂದ 8ನೇ ವರೆಗೆ ಕನ್ನಡ ಮಾಧ್ಯಮ, ಎಲ್‌ಕೆಜಿ ಯುಕೆಜಿ, 1ರಿಂದ 3ನೇ ತರಗತಿಯವರೆಗೆ ಆಂಗ್ಲ ಮಾಧ್ಯಮ ತರಗತಿಗಳು ಇಲ್ಲಿವೆ. 10 ಮಂದಿ ಶಿಕ್ಷಕರಿದ್ದಾರೆ. 6 ಮಂದಿ ಡಿಎಡ್‌ ಆದವರು (ಪಿಇಟಿ ‌ಹಿತ), 4 ಮಂದಿ ಬಿಎಡ್‌ ಆದವರು (ಇವರಲ್ಲಿ ಸ್ನಾತಕೋತ್ತರ ಪದವೀಧರರೂ ಇದ್ದಾರೆ) ಕನಿಷ್ಠ ಮೂವರು ಶಿಕ್ಷಕರ ಕೊರತೆ ಇದೆ. ಈ ಕೊರತೆಯನ್ನು ನೀಗುವ ಬಗ್ಗೆ ಇಲಾಖೆಗೆ ಮನವಿಗೆ ಧನಾತ್ಮಕ ಸ್ಪಂದನೆ ಕಂಡುಬಂದಿರುವುದಾಗಿ ತಿಳಿದುಬಂದಿದೆ.

ರಸ್ತೆ ವಿಸ್ತರಣೆಗೊಂಡಾಗ ಸಮಸ್ಯೆ :

ರಾಷ್ಟ್ರೀಯ ಹೆದ್ದಾರಿ 169 ಶಾಲೆಯನ್ನು ಸವರಿಕೊಂಡೇ ಹೋಗುವುದಾಗಿ ಗುರುತಿಸಲಾಗಿರುವ ಕಾರಣ, ಇಂದಲ್ಲ ನಾಳೆ ಕೆಲವು ಕೊಠಡಿಗಳು, ಶೌಚಾಲಯ ತೆರವಾಗುವುದರಿಂದ ಬದಲಿ ವ್ಯವಸ್ಥೆ ಮಾಡಬೇಕಾಗುತ್ತದೆ. ಎರಡು ವಾಲಿಬಾಲ್‌ ಕೋರ್ಟ್‌ ಹಾಕಲು ಅವಕಾಶವಿದ್ದು, ಶಾಲೆಯ ಹಿಂಭಾಗದ ಹೈಸ್ಕೂಲಿನ ಮೈದಾನ ಆಟೋಟಗಳಿಗೆ ಬಳಸಲು ಅನುಮತಿ ಇದೆ.

Advertisement

ದಾನಿಗಳ ಸಹಕಾರದಿಂದ ಇದುವರೆಗೆ ಉತ್ತಮ ಸೌಕರ್ಯಗಳನ್ನು ಕೊಡಿಸಲು ಸಾಧ್ಯವಾಗಿದೆ. ಸರಕಾರ ಇನ್ನಷ್ಟು ಸೌಕರ್ಯಗಳನ್ನು ಒದಗಿಸಬೇಕಾಗಿದೆ. ವಿದ್ಯಾಭಿಮಾನಿಗಳ ಸಹಕಾರವನ್ನೂ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಭಾಸ್ಕರ ಆಚಾರ್ಯ,   ಅಧ್ಯಕ್ಷರು, ಎಸ್‌ಡಿಎಂಸಿ

 

-ಧನಂಜಯ ಮೂಡುಬಿದಿರೆ

 

Advertisement

Udayavani is now on Telegram. Click here to join our channel and stay updated with the latest news.

Next