Advertisement

ಸ್ವತ್ಛಗೊಳ್ಳುತ್ತಿರುವ ಹಲವರ ಕೆರೆಯಲ್ಲಿ ಅಂತರ್ಜಲ ವೃದ್ಧಿ

10:50 PM Apr 03, 2019 | sudhir |

ಬಸ್ರೂರು: ಶುಂಠಿ ಬಿ. ನರಸಿಂಹರಾಜ ಪ್ರಭು ಮತ್ತು ಮಕ್ಕಳು ಸಾರ್ವಜನಿಕರೊಂದಿಗೆ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪವಿರುವ ಹಲವರ ಕೆರೆಯ ಹೂಳೆತ್ತಲು ಆರಂಭಿಸಿ ಹದಿನೈದು ದಿನಗಳ ಬಳಿಕ ಕೆರೆಯಲ್ಲಿ ಅಂತರ್ಜಲ ವೃದ್ಧಿಯಾಗಿ ನೀರು ಬಂದಿದೆ.

Advertisement

ಕೆರೆಗೆ ಕಾಂಕ್ರೀಟ್‌ ಫೆನ್ಸಿಂಗ್‌ ಮಾಡಲಾಗುವುದು. ಸ್ವತ್ಛತೆಯ ಕೆಲಸ ಇನ್ನೂ ಬಾಕಿಯಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ತಿಳಿಸಿದ್ದಾರೆ.

ಐತಿಹಾಸಿಕ ನಗರ ಬಸ್ರೂರಿನಲ್ಲಿರುವ ಏಳು ಕೆರೆಗಳು ಹೂಳಿನಿಂದ ಆವೃತವಾಗಿ ಉಪಯೋಗಕ್ಕೆ ಬಾರದಿರುವ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next