Advertisement

ಬುಡಕಟ್ಟು ಜನರ ಮೇಲೆ ಆದಾಯ ತೆರಿಗೆ ಕಣ್ಣು

12:30 AM Dec 30, 2018 | Team Udayavani |

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯ ಕಣ್ಣು ಈಗ ಈಶಾನ್ಯ ರಾಜ್ಯಗಳ ಬುಡಕಟ್ಟು ಜನರ ಮೇಲೂ ಬಿದ್ದಿದೆ. ನೋಟು ಅಮಾನ್ಯದ ವೇಳೆ ಈ ಭಾಗದ ಬುಡಕಟ್ಟು ಜನರ ಮಧ್ಯೆ ಭಾರಿ ಪ್ರಮಾಣದ ಹಣಕಾಸು ವಹಿವಾಟು ನಡೆದಿದೆ. ಚುನಾವಣೆ ಮೇಲ್ವಿ ಚಾರಣೆ ಪ್ರಕ್ರಿಯೆಯಲ್ಲಿ ಈ ಅಂಶ ಗಮನಕ್ಕೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ತೆರಿಗೆ ತಪ್ಪಿಸುತ್ತಿರುವ ಈಶಾನ್ಯ ರಾಜ್ಯಗಳ ಬುಡಕಟ್ಟು ಜನರ ಮೇಲೆ ಈಗ ತೆರಿಗೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

Advertisement

ಬುಡಕಟ್ಟು ಸಮುದಾಯದ ಜನರು ಗುವಾಹಟಿ, ಅಗರ್ತಲಾ, ಇಂಫಾಲ ಹಾಗೂ ದಿಲ್ಲಿ ಇತ್ಯಾದಿ ದೊಡ್ಡ ನಗರಗಳಲ್ಲಿ ಮನೆಗಳನ್ನು ಹೊಂದಿದ್ದಾರೆ. ಅದರಿಂದ ಬರುವ ಬಾಡಿಗೆ ಮೊತ್ತಕ್ಕೆ ಅವರು ತೆರಿಗೆ ಪಾವತಿ ಮಾಡುತ್ತಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಯಾವುದೇ ಮೂಲದ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡುವ ಆದಾಯ ತೆರಿಗೆ ಕಾಯ್ದೆಯ 10(26) ನೇ ಪರಿಚ್ಛೇದವನ್ನು ಜನರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಭಾಗದ ಜನರಲ್ಲಿ ಯಾವುದೇ ಆದಾಯಕ್ಕೂ ತೆರಿಗೆ ಪಾವತಿ ಮಾಡಬೇಕಿಲ್ಲ ಎಂಬ ತಪ್ಪು ತಿಳಿವಳಿಕೆಯಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈಶಾನ್ಯ ಭಾಗದ ಜನರು ಹೊಂದಿರುವ ಹೋಟೆಲ್‌ಗ‌ಳೂ ಯಾವುದೇ ರಿಟರ್ನ್ಸ್ ಸಲ್ಲಿಸುತ್ತಿಲ್ಲ. ತೆರಿಗೆಯನ್ನೂ ಪಾವತಿಸುತ್ತಿಲ್ಲ. ಹೀಗಾಗಿ ಮೊದಲು ಆದಾಯ ತೆರಿಗೆ ವಿನಾಯಿತಿಯ ಮಿತಿ ಹಾಗೂ ವ್ಯಾಪ್ತಿಯನ್ನು ತಿಳಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ಇಲಾಖೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next