Advertisement

ಯಡೂರಿನಲ್ಲಿ ಭೀಕರ ಅಪಘಾತ: ಪೆರಂಪಳ್ಳಿ ಯುವಕ ಸಾವು

04:34 PM Apr 01, 2021 | Team Udayavani |

ಕುಂದಾಪುರ: ಬೈಕೊಂದು ಟಿಂಬರ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ  ಮೃತಪಟ್ಟಿರುವ ಘಟನೆ ಬುಧವಾರ (ಮಾ.31) ದಂದು ಮಾಸ್ತಿಕಟ್ಟೆ ಯಡೂರು ಸಮೀಪ ನಡೆದಿದೆ.

Advertisement

ಮೃತ ಯುವಕನನ್ನು ಉಡುಪಿ ಪೆರಂಪಳ್ಳಿ ನಿವಾಸಿ ಜೋಸೆಫ್ ಗೋಮ್ಸ್ (28) ಎಂದು ಗುರುತಿಸಲಾಗಿದ್ದು,  ತನ್ನ ಸ್ನೇಹಿತನ ಮನೆಗೆ ಬೈಕ್ ನಲ್ಲಿ ತೆರಳುವ ಸಮಯದಲ್ಲಿ ಎದುರಿನಿಂದ ಬಂದ ಟಿಂಬರ್ ಲಾರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:ಆಲಮಟ್ಟಿಗೆ ಭೇಟಿ ನೀಡಿದ್ದ ಕೇಂದ್ರ ಜಲ ಆಯೋಗದ ಇಬ್ಬರು ಅಧಿಕಾರಿಗಳು ರಸ್ತೆ ಅಪಘಾತದಲ್ಲಿ ಸಾವು

ಘಟನೆ ನಡೆದ ಸಮಯದಲ್ಲಿ ಆತನ ಸ್ನೇಹಿತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು,  ಈತ ಮಾತ್ರ ಬೈಕ್ ನಲ್ಲಿ ತೆರಳುತ್ತಿದ್ದ  ಎನ್ನಲಾಗಿದೆ. ಅಪಘಾತದಲ್ಲಿ ಜೋಸೆಫ್ ಗೋಮ್ಸ್ ಗೆ ತೀವ್ರವಾದ ಗಾಯಗಳಾಗಿದ್ದು ಸ್ಥಳಲ್ಲಿಯೇ ಮೃತಪಟ್ಟಿದ್ದಾನೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next