Advertisement

ಜೋಳದ ದಂಟಿಗೆ ಬೆಂಕಿ; ತಪ್ಪಿದ ಅನಾಹುತ

01:00 PM Mar 10, 2021 | Team Udayavani |

ರಾಯಚೂರು: ಜೋಳದ ದಂಟು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ ಬೆಂಕಿ ತಗುಲಿದ ಘಟನೆ ಸಮೀಪದ ಆಶಾಪುರ ರಸ್ತೆಯ ಅಗಾಫೆ ಚರ್ಚ್ ಬಳಿ ನಡೆದಿದೆ.

Advertisement

ವಿದ್ಯುತ್ ಮೇನ್ ವೈರ್ ಗೆ ದಂಟು ತಗುಲಿ ಬೆಂಕಿ ಹೊತ್ತಿಕೊಂಡಿದೆ.

ತಾಲೂಕಿನ ಮನ್ಸಲಾಪುರದಿಂದ ಉಡಮಗಲ್ ಖಾನಪುರಕ್ಕೆ ಟ್ರ್ಯಾಕ್ಟರ್ ನಲ್ಲಿ ಮೇವು ಒಯ್ಯಲಾಗುತ್ತಿತ್ತು. ಸಾವಿರಾರು ರೂಪಾಯಿ ಮೌಲ್ಯದ ಮೇವು ಹೊತ್ತಿ ಉರಿದಿದೆ.

ಇದನ್ನೂ ಓದಿ:ವಿದೇಶಿ ಬಂಡವಾಳ ಒಳಹರಿವು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300 ಅಂಕ ಜಿಗಿತ

ಟ್ರ್ಯಾಕ್ಟರ್ ಚಾಲಕ ವಿರೇಶನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next