Advertisement

ಟಿಕ್ರಿ ಗಡಿಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ರೈತನ ಶವ ಪತ್ತೆ!

02:43 PM Mar 26, 2021 | Team Udayavani |

ನವದೆಹಲಿ:  ಕೃಷಿ ಕಾಯಿದೆಯ ಕುರಿತಾದ ಹೋರಾಟ ದಿನೇ ದಿನೇ ಹೊಸ ಹೊಸ ರೂಪವನ್ನು ಪಡೆಯುತ್ತಿರುವ ಬೆನ್ನಲ್ಲೇ,  ಈ  ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್ ಮೂಲದ  61 ವರ್ಷದ ರೈತನೊಬ್ಬ ಹರಿಯಾಣದ ಜಜ್ಜರ್ ಪ್ರದೇಶದಲ್ಲಿರುವ ಬಸ್ ಸ್ಟ್ಯಾಂಡ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ.

Advertisement

ಮೃತ ವ್ಯಕ್ತಿಯನ್ನು ಹಕಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರು ಟಿಕ್ರಿ ಗಡಿಯಲ್ಲಿನ ರೈತ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂದು ತಿಳಿದುಬಂದಿದೆ.

ಈ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು ಜಜ್ಜರ್ ಪ್ರದೇಶದ ಬಸ್ ಸ್ಟ್ಯಾಂಡ್ ನ ಹಿಂಭಾಗದಲ್ಲಿ ಕತ್ತು ಸೀಳಿರುವ ಸ್ಥಿತಿಯಲ್ಲಿ ಈ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈತನ ಸಾವಿನ ಕಾರಣದ ಹಿನ್ನೆಲೆ ಏನೆಂಬುದು ಈವರೆಗೂ ತಿಳಿದುಬಂದಿಲ್ಲ. ಹರಿತವಾಗಿರುವ ಆಯುಧದಿಂದ ಈತನ ಕುತ್ತಿಗೆ ಸೀಳಲಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಶಹಪುರ ಟೋಲ್ ಗೇಟ್ ನಲ್ಲಿ ಎಇಇ ಮೇಲೆ ತೀವ್ರ ಹಲ್ಲೆ: ಎಂಟು ಜನರ ಬಂಧನ

ಈ ಕುರಿತಾಗಿ ‍ಘಟನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ತನಿಖೆಯನ್ನು ಆರಂಭಿಸಲಾಗಿದ್ದು, ಈ ‍ಘಟನೆಗೆ ಸಂಬಂಧಿಸಿದಂತೆ FIR ದಾಖಲಿಸಲಾಗಿದೆ ಎಂದಿರುವ ಅಧಿಕಾರಿಗಳು, ಈ ಘಟನೆ ನಡೆಯುವುದಕ್ಕಿಂತ ಮೊದಲು ಈತ ಯಾರೊಡನೆಯಾದರೂ ಗಲಾಟೆ ಮಾಡಿಕೊಂಡಿದ್ದನೇ ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ. ಸದ್ಯ ಈ ವ್ಯಕ್ತಿ ಶವವನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು  ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಭಾರತದಲ್ಲಿರುವ ಮುಸ್ಲಿಮರು ಒಟ್ಟಾದರೆ ನಾಲ್ಕು ಪಾಕ್ ಸೃಷ್ಟಿ: ಟಿಎಂಸಿ ಮುಖಂಡ ಶೇಖ್

Advertisement

Udayavani is now on Telegram. Click here to join our channel and stay updated with the latest news.

Next