Advertisement

ಒಡೆದ ಬೆಳಚವಾಡಿ ಕೆರೆ ಏರಿ: ಅಪಾರ ಪ್ರಮಾಣದ ನೀರು ಪೋಲು

02:05 PM Aug 22, 2021 | Team Udayavani |

ಗುಂಡ್ಲುಪೇಟೆ: ಕೆರೆಗೆ ನೀರು ತುಂಬಿಸುವ ಯೋಜನೆಯಡಿ ತುಂಬಿದ ತಾಲೂಕಿನ ಬೆಳಚವಾಡಿ ಕೆರೆಯ ಏರಿ ಒಡೆದು ಅಪಾರ ಪ್ರಮಾಣ ನೀರು ಹೊರ ಹೋಗಿದೆ. ಇದರಿಂದ ಹಲವು ರೈತರು ಬೆಳೆದಿದ್ದ ಫಸಲು ನೀರು ಪಾಲಾಗಿದೆ.

Advertisement

ಕೆರೆಯ ಕೋಡಿ ಒಡೆದ ಪರಿಣಾಮ ಕಮರಹಳ್ಳಿ ಕೆರೆಗೆ ನೀರು ಹರಿಯುತ್ತಿದ್ದು, ಮಾರ್ಗ ಮಧ್ಯೆ ಐವತ್ತಕ್ಕೆ ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಕಬ್ಬು, ಅರಿಶಿನ, ಜೋಳ ನಾಶವಾಗಿದೆ. ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿನ ಮೆದೆಗಳನ್ನು ಹೊತ್ತೊಯ್ದಿದೆ. ಇದರಿಂದ ಅಪಾರ ಪ್ರಮಾಣದ ನಷ್ಟವಾಗಿದೆ.

ಅನೇಕ ವರ್ಷಗಳಿಂದ ಕೆರೆ ಸಂಪೂರ್ಣವಾಗಿ ತುಂಬಿರಲಿಲ್ಲ. ಆದರೆ ಕೆರೆ ತುಂಬಿಸುವ ಯೋಜನೆ ಜಾರಿಯಾದ ನಂತರ ಬೆಳಚಲವಾಡಿ ಕೆರೆಗೆ ನೀರು ಬಿಟ್ಟು ತುಂಬಿಸಲಾಗಿತ್ತು‌. ಈ ಮಧ್ಯೆ ಕೋಡಿ ಎತ್ತರ ಮಾಡಿದ ಕಾರಣ ಒತ್ತಡ ಹೆಚ್ಚಾಗಿ ಏರಿ ಒಡೆದಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:ತಮಿಳುನಾಡು : ಶ್ರೀಲಂಕಾ ನೌಕ ಪಡೆಯಿಂದ ಭಾರತೀಯ 60 ಮೀನುಗಾರಿಕಾ ಬೋಟ್ ಗಳ ಮೇಲೆ ಕಲ್ಲು ತೂರಾಟ

ಕೆರೆ ಏರಿಯ ಸ್ಥಿತಿಗತಿ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್ ಗಳು ಪರಿಸೀಲಿಸದೆ ಇರುವುದು ಕೆರೆ ಏರಿ ಒಡೆಯಲು ಕಾರಣ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.

Advertisement

ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಎಷ್ಟು ಬಾರಿ ತಂದರು ಮುಂಜಾಗ್ರತೆ ವಹಿಸಿಲ್ಲ. ಇದೀಗ ಕೆರೆ ಒಡೆದು ಅನಾಹುತ ಸಂಭವಿಸಿದೆ. ಇದರಿಂದ ರೈತರ ಬೆಳೆಗಳು ನೀರು ಪಾಲಾಗಿರುವ ಹಿನ್ನೆಲೆ ಬೆಳೆ ನಷ್ಟ  ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next