Advertisement

ಯುವಕ, ಯುವತಿಯರ ಫೋಟೋ ಸಂಗ್ರಹಿಸಿ ಅಶ್ಲೀಲ ಪೋಸ್ಟರ್‌ ಎಡಿಟ್ : ಕಿಡಿಗೇಡಿಗಳ ಸೆರೆ

01:27 PM Feb 16, 2022 | Team Udayavani |

ವಿಜಯಪುರ: ಯುವಕ, ಯುವತಿಯರ, ಭಾವಚಿತ್ರಗಳನ್ನು ಸಂಗ್ರಹಿಸಿ, ಅವರ ಪೋಟೋಗಳನ್ನು ಬಳಕೆ ಮಾಡಿಕೊಂಡು, ಅಶ್ಲೀಲ ಸಂದೇಶಗಳನ್ನು ಸಿದ್ದಪಡಿಸಿ, ಯುವತಿಯರ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಆರೋಪದಡಿಯಲ್ಲಿ ಮೂರು ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಚನ್ನರಾಯಪಟ್ಟಣ ಹೋಬಳಿ ಚೀಮಾಚನಹಳ್ಳಿ ಗ್ರಾಮದ 22 ವರ್ಷದ ನಿತಿನ್‌, 36 ವರ್ಷದ ಮುನಿರಾಜು, ನಲ್ಲಪನಹಳ್ಳಿ ಗ್ರಾಮದ 22 ವರ್ಷದ ಆಕಾಶ್‌ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಬಸವನಗೌಡ.ಕೆ.ಪಾಟೀಲ್‌ ತಿಳಿಸಿದ್ದಾರೆ.

ಗ್ರಾಮದ ಯುವಕ, ಯುವತಿಯರು ಹಾಗೂ ಸಮಾಜದಲ್ಲಿ ಉತ್ತಮ ಹೆಸರು ಗಳಿಸಿಕೊಂಡಿರುವವರ ಭಾವಚಿತ್ರಗಳನ್ನು ಸಂಗ್ರಹಿಸಿ, ಅವರ ಮುಖಗಳನ್ನು ಅಶ್ಲೀಲ ಪೋಟೊಗಳಿಗೆ ಅಳವಡಿಸುವುದು, ಹೆಣ್ಣು ಮಕ್ಕಳ ಬಗ್ಗೆ ಅಸಭ್ಯವಾದ ಮೆಸೇಜ್‌ಗಳನ್ನು ಇನ್‌ಸ್ಟಾ ಗ್ರಾಂ ನಲ್ಲಿ ಹರಿದುಬಿಟ್ಟಿದ್ದರು. ಈ ಕುರಿತು ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಲಹಂಕ ಠಾಣೆಯಲ್ಲೂ ದೂರು ದಾಖಲಾಗಿತ್ತು.

ಅಲ್ಲದೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಬಗ್ಗೆಯೂ ಅವಹೇಳನಕಾರಿಯಾಗಿ ಪೋಸ್ಟ್ ಹಾಕಲಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next