Advertisement

ಸಹೋದ್ಯೋಗಿಯ ಹತ್ಯೆ: ಆರೋಪಿ ಪರಾರಿ

07:30 PM Nov 04, 2021 | Team Udayavani |

ಥಾಣೆ: ಕ್ಷುಲ್ಲಕ ವಿವಾದಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಥಾಣೆ ಜಿಲ್ಲೆಯ ಹಳ್ಳಿಯೊಂದರಲ್ಲಿ  ಸಂಭವಿಸಿದೆ.

Advertisement

ಆರೋಪಿಯನ್ನು ಅಸೀಮ್‌ ಅಲಿಯಾಸ್‌ ಸಾಕಿಬ್‌ ಅನ್ಸಾರಿ ರೈಸ್‌ ಅಹ್ಮದ್‌ (21) ಎಂದು ಗುರುತಿಸಲಾಗಿದ್ದು, ಆತ ಸಹೋದ್ಯೋಗಿ ರಾಜು ಅಶೋಕ್‌ ಖ್ಯಾತಿಮ್‌ (18)  ಮೇಲೆ ರೇಡಿಯಂ ಕಟ್ಟರ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾನೆ.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನಾರ್ಪೋಲಿ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next