Advertisement

ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

07:37 PM Jun 03, 2021 | Team Udayavani |

ರಾಯಚೂರು: ನಗರದ ಎಪಿಎಂಸಿಯ ರೈತ ಭವನ ಸಮೀಪದ ಚರಂಡಿಯಲ್ಲಿ ಅಪರಿಚಿತ ಶವ ಸಿಕ್ಕಿದೆ. ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ಅಸ್ಥಿ ಪಂಜರ ಕಾಣುತ್ತಿದೆ.

Advertisement

ಎಪಿಎಂಸಿ ವರ್ತಕರು ಹಮಾಲರು ಗುರುವಾರ ಬೆಳಗ್ಗೆ ಶವವನ್ನು ಗಮನಿಸಿದ್ದು, ಪೊಲೀಸರಿಗೆ ತಿಳಿಸಿದ್ದಾರೆ. ಶವದ ಕೈ ಮೇಲೆ ಎನ್ ಟಿಆರ್ ಎಂದು ಅಚ್ಚೆ ಹಾಕಿಸಿಕೊಡಿದ್ದು, ಮೃತ ವ್ಯಕ್ತಿ ತೆಲುಗು ಸಿನಿಮಾ ನಟ ಎನ್ ಟಿ ಆರ್ ಅಭಿಮಾನಿ ಇರಬೇಕು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಫೈಜರ್,ಜೆ&ಜೆ,ಮಾಡೆರ್ನಾ ಸಂಸ್ಥೆಗಳೊಂದಿಗೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ: ಶ್ರಿಂಗ್ಲಾ 

ಮೃತನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next