Advertisement

ಪುತ್ತೂರು: ಯುವತಿಯರೇ ಹೆಚ್ಚಿರುವ ಬಸ್‌ನಲ್ಲಿ ಅಸಭ್ಯ ವರ್ತನೆ : ಆರೋಪಿ ಬಂಧನ

04:18 PM Mar 09, 2021 | Team Udayavani |

ಪುತ್ತೂರು: ಯುವತಿಯರೇ ಹೆಚ್ಚಿರುವ ಬಸ್‌ ಅನ್ನು ಗುರಿಯಾಗಿಸಿ ಪ್ರಯಾಣಿಕನ ಸೋಗಿನಲ್ಲಿ ಬಸ್‌ ಏರಿ ಕಿರುಕುಳ ನೀಡುತ್ತಿದ್ದ ಆರೋಪಿಯೋರ್ವನನ್ನು ಪ್ರಯಾಣಿಕರು ರೆಡ್‌ ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗಡಿಪಿಲ ಬಳಿ ಸಂಭವಿಸಿದೆ.

Advertisement

ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಅಂಗಡಿ ಹೊಂದಿರುವ ಬೆಟ್ಟಂಪಾಡಿಯ ನೌಫಲ್‌ ಆರೋಪಿ. ಮಾ.8ರಂದು ಸಂಜೆ ಪುತ್ತೂರು-ಸವಣೂರು- ಕಡಬ ಸಂಚರಿಸುವ ಬಸ್‌ ಏರಿದ್ದ ಆತ ವೈದ್ಯ ವಿದ್ಯಾರ್ಥಿನಿಯೋರ್ವರ ಜತೆ ಅಸಭ್ಯವಾಗಿ ವರ್ತಿಸಿದ್ದ. ಈ ವಿಷಯ ತಿಳಿದು ಸಂಘಟನೆಯೊಂದರ ಕಾರ್ಯಕರ್ತರು ಗಡಿಪಿಲ ಬಳಿ ಬಸ್‌ ನಿಲ್ಲಿಸಿ ಆರೋಪಿಯನ್ನು ವಿಚಾರಿಸಿ ಬಳಿಕ ಪುತ್ತೂರು ಪೊಲೀಸರಿಗೆ ಒಪ್ಪಿಸಿದರು. ಆರೋಪಿಯನ್ನು ಮಹಿಳಾ ಪೊಲೀಸ್‌ ಠಾಣೆಗೆ ಒಪ್ಪಿಸಲಾಗಿದೆ. ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಆರೋಪಿ ಕಳೆದ ಹಲವು ದಿನಗಳಿಂದ ಯುವತಿಯರು ಹೆಚ್ಚಾಗಿರುವ ಬಸ್‌ ಅನ್ನು ಗುರುತಿಸಿ ಸಂಚರಿಸುತ್ತಿದ್ದ ಬಗ್ಗೆಯು ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : 154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಕಮಲ್ ಹಾಸನ್ ಮಕ್ಕಳ್‌ ನೀಧಿ ಮಯಂ

Advertisement

Udayavani is now on Telegram. Click here to join our channel and stay updated with the latest news.

Next