Advertisement

ಪತಿ ಕಾಲು ಕತ್ತರಿಸಿ ಮಣ್ಣು ಮಾಡಿಯೆಂದು ಪತ್ನಿ ಕೈಗೆ ಕೊಟ್ಟರು!

02:24 PM Sep 07, 2022 | Team Udayavani |

ಮಂಡ್ಯ: ನಗರದ ಮಿಮ್ಸ್‌ನಲ್ಲಿ ವೈದ್ಯರು, ಸಿಬ್ಬಂದಿಗಳ ಯಡವಟ್ಟು ಹಾಗೂ ನಿರ್ಲಕ್ಷ್ಯ ಮುಂದುವರಿದಿದ್ದು, ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದ ಪತಿಯ ಕಾಲು ಕತ್ತರಿಸಿ ಪತ್ನಿಯ ಕೈಗೆ ಕೊಟ್ಟ ಘಟನೆ ಮಂಗಳವಾರ ನಡೆದಿದೆ.

Advertisement

ಕೀಲಾರ ಗ್ರಾಮದ ಪ್ರಕಾಶ್‌ ಎಂಬುವರು ಕಳೆದ ನಾಲ್ಕು ದಿನಗಳ ಹಿಂದೆ ಗ್ಯಾಂಗ್ರಿನ್‌ನಿಂದ ಬಳಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅದರಂತೆ ಮಂಗಳವಾರ ಶಸ್ತ್ರ ಚಿಕಿತ್ಸೆ ನಡೆಸಲು ಕುಟುಂಬಸ್ಥರ ಅನುಮತಿ ಮೇರೆಗೆ ಗ್ಯಾಂಗ್ರಿನ್‌ ಆಗಿದ್ದ ಕಾಲನ್ನು ತೆಗೆದಿದ್ದಾರೆ. ತೆಗೆದ ಕಾಲನ್ನು ಪತ್ನಿ ವೃದ್ಧೆ ಭಾಗ್ಯಮ್ಮ ಅವರಿಗೆ ಮಣ್ಣು ಮಾಡುವಂತೆ ನೀಡಿದ್ದಾರೆ.

ಇದರಿಂದ ಗಾಬರಿಗೊಂಡ ಭಾಗ್ಯಮ್ಮ ದಿಕ್ಕು ತೋಚದಂತೆ ಪತಿಯ ಕಾಲು ಹಿಡಿದುಕೊಂಡು ಅಳುತ್ತಾ ನಿಂತಿದ್ದರು. ಜತೆಗೆ ಅದನ್ನು ನಾಶಪಡಿಸಲು ಸಿಬ್ಬಂದಿ ಹಣ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಿದರು. ವಿಷಯ ತಿಳಿದ ಸ್ಥಳೀಯ ಮುಖಂಡರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next