Advertisement

ಮಣಿಪಾಲ: ಮಣ್ಣಪಳ್ಳಕ್ಕೆ ಸ್ನೇಹಿತೆಯೊಟ್ಟಿಗೆ ತಿರುಗಾಡಲು ಬಂದಿದ್ದ ಯುವಕನ ಮೇಲೆ ಹಲ್ಲೆ

06:44 PM Dec 11, 2021 | Team Udayavani |

ಉಡುಪಿ: ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿ ಸ್ನೇಹಿತೆಯೊಂದಿಗೆ ತಿರುಗಾಡಲು ಹೋಗಿದ್ದ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ  ನಡೆದಿದೆ.

Advertisement

ಈ ಬಗ್ಗೆ ಸಾಲಿಗ್ರಾಮದ ಅಲ್ತಾಫ್ (27) ಎಂಬವರು ಪ್ರಾಣೇಶ್, ವಿನೂತ್ ಪೂಜಾರಿ, ಸಂಜಯ ಕುಮಾರ್ ಎಂಬ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಅಲ್ತಾಫ್ ಅವರು ಮಧ್ಯಾಹ್ನದ ವೇಳೆಗೆ ನೆರೆಮನೆಯ ಸ್ನೇಹಿತೆಯೊಂದಿಗೆ ತಿರುಗಾಡಲು ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿ ಹೋಗಿದ್ದರು.

ಈ ವೇಳೆ ಆರೋಪಿಗಳಾದ ಪ್ರಾಣೇಶ್, ವಿನೂತ್ ಪೂಜಾರಿ ಮತ್ತು ಸಂಜಯ್ ಕುಮಾರ್ ಇವರಿಬ್ಬರನ್ನು ತಡೆದು ಅಲ್ತಾಫ್ ರನ್ನು ತಳ್ಳಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next