Advertisement

ಮಾಲಕನ ಮೇಲೆ ದ್ವೇಷ: ಪುತ್ರಿ ಮೇಲೆ ಅತ್ಯಾಚಾರ!

11:01 PM Mar 04, 2021 | Team Udayavani |

ಚಿಕ್ಕಮಗಳೂರು:  ತಂದೆ ಮೇಲಿನ ದ್ವೇಷಕ್ಕೆ ಅಪ್ರಾಪ್ತ ವಯಸ್ಕ ಪುತ್ರಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಾಳೆಹೊನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಮಹೇಶ್‌ನನ್ನು ಬಂಧಿಸಲಾಗಿದೆ.

Advertisement

ಮಹೇಶ್‌ ಏಳು ತಿಂಗಳ ಹಿಂದೆ ಬಾಲಕಿಯ ತಂದೆ ಬಳಿ ಹಿಟಾಚಿ ಡ್ರೈವರ್‌ ಆಗಿದ್ದ. ಆಗ  ಮಗಳ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದನ್ನು ಮಾಲಕರು ಮಹೇಶ್‌ಗೆ ಎಚ್ಚರಿಕೆ ನೀಡಿ ಕೆಲಸದಿಂದ ತೆಗೆದು ಹಾಕಿದ್ದರು. ಇದೇ ಕೋಪದಿಂದ  ಫೆ.26ರಂದು ಬಾಲಕಿಯನ್ನು ಮೊಬೈಲ್‌ ಮೂಲಕ ಸಂಪರ್ಕಿಸಿದ ಆರೋಪಿ, ಆಕೆಯನ್ನು  ಕಳಸ ಸಮೀಪದ ಹೋಂ ಸ್ಟೇಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಮನೆಗೆ ಬಂದ ಬಾಲಕಿ ಸಹಜವಾಗಿರದ ಕಾರಣ ಪ್ರಶ್ನಿಸಿದಾಗ ವಿಷಯ ಬಹಿರಂಗವಾಯಿತು.  ಕುಡಿಯುವ ನೀರಿನಲ್ಲಿ ಮತ್ತೇರುವ ಪುಡಿ ಬೆರೆಸಿ ಅತ್ಯಾಚಾರವೆಸಗಲಾಗಿದೆ ಎಂದು ಪೋಷಕರು ದೂರು ದಾಖಲಿಸಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ  ಸ್ಪಷ್ಟವಾಗಲಿದೆ ಎಂದು ಎಸ್‌ಪಿ ಎಂ.ಎಚ್‌. ಅಕ್ಷಯ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next